‘ವಕೀಲರು ಸಲ್ಲಿಸುವ ಅರ್ಜಿಗಳಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಲು ವಕೀಲರು ಹೈಕೋರ್ಟ್ ಪ್ರವೇಶಿಸಲು ಅವಕಾಶ ಇಲ್ಲ. ಹೀಗಾಗಿ, ಆಕ್ಷೇಪಣೆಗೆ ಪ್ರತಿಕ್ರಿಯೆ ಸಲ್ಲಿಸಿ ಸರಿಪಡಿಸುವ ಅವಧಿಯನ್ನು ಜೂನ್ 25ರ ತನಕ ವಿಸ್ತರಿಸಲಾಗಿದೆ. ಇದು ಕಲಬುರ್ಗಿ ಮತ್ತು ಧಾರವಾಡ ಪೀಠಕ್ಕೂ ಅನ್ವಯವಾಗುತ್ತದೆ. ಕ್ರಿಮಿನಲ್ ವಿಷಯಗಳಲ್ಲಿ ಶುಲ್ಕ ಮತ್ತು ನಿರ್ವಹಣೆ ಹೊರತುಪಡಿಸಿ ಬೇರೆ ಆಕ್ಷೇಪಣೆಗಳನ್ನು ಎತ್ತಬಾರದು’ ಎಂದು ಪೀಠ ತಿಳಿಸಿತು.