ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಾಂಟ್ರೊ ರವಿ ವಿರುದ್ಧ ಯಾರೆಲ್ಲ ದೂರು ನೀಡಿದ್ದಾರೆ ಎಂಬುದರ ಬಗ್ಗೆ ಸವಿಸ್ತಾರ ತನಿಖೆ ಮಾಡಲು ತಿಳಿಸಿರುವೆ. ರವಿ ಏನೆಲ್ಲ ಮೋಸ ಮಾಡಿದ್ದಾನೆ ಅದರ ಮಾಹಿತಿ ಪಡೆಯಬೇಕಿದೆ. ಈ ಹಿಂದೆ ಆತನ ಮೇಲೆ ಗೂಂಡಾ ಕೇಸ್ ಕೂಡ ಹಾಕಲಾಗಿತ್ತು. ಹೀಗಾಗಿ ತಕ್ಷಣ ಆತನ ಮೇಲೆ ಕ್ರಮಕ್ಕೆ ಸೂಚನೆ ಕೊಟ್ಟಿರುವೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.