‘ಸಮಿತಿಗೆ ಮರಿತಿಬ್ಬೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಮತ್ತು ಕಾಂಗ್ರೆಸ್, ಬಿಜೆಪಿಯ ತಲಾ ಇಬ್ಬರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಮರಿತಿಬ್ಬೇಗೌಡ ಅವರು ತಾಂತ್ರಿಕವಾಗಿ ಜೆಡಿಎಸ್ ಸದಸ್ಯರಾಗಿದ್ದರೂ, ಮಾನಸಿಕವಾಗಿ ಹಾಗೂ ಸದನದಲ್ಲಿ ಅವರ ನಡವಳಿಕೆ ಹಾಗೂ ನಿಲುವುಗಳಲ್ಲಿ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ಪಕ್ಷದವರಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ, ಸಮಿತಿ ರಚನೆಯಲ್ಲಿ ಪಕ್ಷಪಾತ ನೀತಿ ಅನುಸರಿಸಲಾಗಿದೆ’ ಎಂದು ಪತ್ರದಲ್ಲಿ ಅವರು ದೂರಿದ್ದಾರೆ.