<p><strong>ಹಾಗಲವಾಡಿ:</strong> ಗ್ರಾಮದ ಕೆರೆಯ ಹೂಳು ಎತ್ತುವಾಗ ಮಂಗಳವಾರ ಹೊಯ್ಸಳರ ಕಾಲದ ಬೂದುಬಳಪದ ಕಲ್ಲಿನಪುರಾತನ ವಿಗ್ರಹವೊಂದು ದೊರೆತಿದೆ.</p>.<p>ಮಣ್ಣು ಅಗೆಯುವ ಯಂತ್ರಗಳಿಂದ ಕೆರೆಯ ಹೂಳು ಎತ್ತುವಾಗ ಅಂದಾಜು ಎಂಟು ಅಡಿ ಆಳದಲ್ಲಿ ಈ ವಿಗ್ರಹದೊರೆತಿದೆ. ವಿಗ್ರಹದ ಎರಡೂ ಕೈಗಳು ತುಂಡಾಗಿದ್ದು,ತುಂಡಾದ ಒಂದು ಸ್ಥಳದಲ್ಲಿಯೇ ಸಿಕ್ಕಿದೆ. ಉಳಿದಂತೆ ವಿಗ್ರಹ ಸುಸ್ಥಿತಿಯಲ್ಲಿದ್ದು, ಸುಂದರವಾಗಿದೆ.</p>.<p>ನಿಂತಿರುವ ಭಂಗಿಯಲ್ಲಿರುವ ಈ ಸುಂದರ ವಿಗ್ರಹ ನಾಲ್ಕೂವರೆ ಅಡಿ ಉದ್ದ ಮತ್ತು ಎರಡೂವರೆ ಅಡಿ ಅಗಲವಿದ್ದು,ಭುಜಬಲ, ಕಾಲು ಮತ್ತು ಕೈಗಡಗಳಅಲಂಕೃತವಾಗಿದೆ.</p>.<p>ವಿಗ್ರಹದ ಸುತ್ತಲೂ ಸುರುಳಿ ಆಕಾರದ ಪ್ರಭಾವಳಿ ಇದ್ದು, ಕೆಳಪೀಠದ ಅಕ್ಕಪಕ್ಕ ಭೂದೇವಿ, ಶ್ರೀದೇವಿಯರು ಛತ್ರಿ, ಚಾಮರ ಹಿಡಿದು ನಿಂತಿದ್ದಾರೆ. ಕೆಳಪೀಠದಲ್ಲಿ ಆಕರ್ಷಕ ದಶಾವತರಗಳಸುಂದರ ಕೆತ್ತನೆ ಕಣ್ಮನ ಸೆಳೆಯುತ್ತದೆ. </p>.<p>ಇದು ಜನಾರ್ಧನ/ಚನ್ನಕೇಶವನ ವಿಗ್ರಹವಾಗಿರಬಹುದು ಎಂದು ಗುಬ್ಬಿ ತಾಲ್ಲೂಕು ಇತಿಹಾಸ ಮತ್ತು ಪುರಾತತ್ವಗಳ ಬಗ್ಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ನಡೆಸುತ್ತಿರುವ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಹೋಯ್ಸಳರ ಕಾಲದಲ್ಲಿ ನಾಯಕ ಪಾಳೇಗಾರರ ಮನೆತನದ ಆಳ್ವಿಕೆಗೆ ಒಳಪಟ್ಟಿದ್ದ ಹಾಗಲವಾಡಿ ಗ್ರಾಮದಲ್ಲಿ ಕೋಟೆ ಕೊತ್ತಲ, ದೇವಸ್ಥಾನ ಗಳಿಗೆ ಲೆಕ್ಕವಿಲ್ಲ ಎಂದು ಸ್ಥಳ ಇತಿಹಾಸ ಹೇಳುತ್ತದೆ.</p>.<p>ಗ್ರಾಮದ ಹಳೆಯ ದೇವಾಲಯದ ಬಳಿ ವಿಗ್ರಹ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲು ಗ್ರಾಮಸ್ಥರು ತೀರ್ಮಾನಿಸಿ<br />ದ್ದಾರೆ. ವಿಗ್ರಹದ ಬಗ್ಗೆ ಮೈಸೂರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಗಲವಾಡಿ:</strong> ಗ್ರಾಮದ ಕೆರೆಯ ಹೂಳು ಎತ್ತುವಾಗ ಮಂಗಳವಾರ ಹೊಯ್ಸಳರ ಕಾಲದ ಬೂದುಬಳಪದ ಕಲ್ಲಿನಪುರಾತನ ವಿಗ್ರಹವೊಂದು ದೊರೆತಿದೆ.</p>.<p>ಮಣ್ಣು ಅಗೆಯುವ ಯಂತ್ರಗಳಿಂದ ಕೆರೆಯ ಹೂಳು ಎತ್ತುವಾಗ ಅಂದಾಜು ಎಂಟು ಅಡಿ ಆಳದಲ್ಲಿ ಈ ವಿಗ್ರಹದೊರೆತಿದೆ. ವಿಗ್ರಹದ ಎರಡೂ ಕೈಗಳು ತುಂಡಾಗಿದ್ದು,ತುಂಡಾದ ಒಂದು ಸ್ಥಳದಲ್ಲಿಯೇ ಸಿಕ್ಕಿದೆ. ಉಳಿದಂತೆ ವಿಗ್ರಹ ಸುಸ್ಥಿತಿಯಲ್ಲಿದ್ದು, ಸುಂದರವಾಗಿದೆ.</p>.<p>ನಿಂತಿರುವ ಭಂಗಿಯಲ್ಲಿರುವ ಈ ಸುಂದರ ವಿಗ್ರಹ ನಾಲ್ಕೂವರೆ ಅಡಿ ಉದ್ದ ಮತ್ತು ಎರಡೂವರೆ ಅಡಿ ಅಗಲವಿದ್ದು,ಭುಜಬಲ, ಕಾಲು ಮತ್ತು ಕೈಗಡಗಳಅಲಂಕೃತವಾಗಿದೆ.</p>.<p>ವಿಗ್ರಹದ ಸುತ್ತಲೂ ಸುರುಳಿ ಆಕಾರದ ಪ್ರಭಾವಳಿ ಇದ್ದು, ಕೆಳಪೀಠದ ಅಕ್ಕಪಕ್ಕ ಭೂದೇವಿ, ಶ್ರೀದೇವಿಯರು ಛತ್ರಿ, ಚಾಮರ ಹಿಡಿದು ನಿಂತಿದ್ದಾರೆ. ಕೆಳಪೀಠದಲ್ಲಿ ಆಕರ್ಷಕ ದಶಾವತರಗಳಸುಂದರ ಕೆತ್ತನೆ ಕಣ್ಮನ ಸೆಳೆಯುತ್ತದೆ. </p>.<p>ಇದು ಜನಾರ್ಧನ/ಚನ್ನಕೇಶವನ ವಿಗ್ರಹವಾಗಿರಬಹುದು ಎಂದು ಗುಬ್ಬಿ ತಾಲ್ಲೂಕು ಇತಿಹಾಸ ಮತ್ತು ಪುರಾತತ್ವಗಳ ಬಗ್ಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಅಧ್ಯಯನ ನಡೆಸುತ್ತಿರುವ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಹೋಯ್ಸಳರ ಕಾಲದಲ್ಲಿ ನಾಯಕ ಪಾಳೇಗಾರರ ಮನೆತನದ ಆಳ್ವಿಕೆಗೆ ಒಳಪಟ್ಟಿದ್ದ ಹಾಗಲವಾಡಿ ಗ್ರಾಮದಲ್ಲಿ ಕೋಟೆ ಕೊತ್ತಲ, ದೇವಸ್ಥಾನ ಗಳಿಗೆ ಲೆಕ್ಕವಿಲ್ಲ ಎಂದು ಸ್ಥಳ ಇತಿಹಾಸ ಹೇಳುತ್ತದೆ.</p>.<p>ಗ್ರಾಮದ ಹಳೆಯ ದೇವಾಲಯದ ಬಳಿ ವಿಗ್ರಹ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲು ಗ್ರಾಮಸ್ಥರು ತೀರ್ಮಾನಿಸಿ<br />ದ್ದಾರೆ. ವಿಗ್ರಹದ ಬಗ್ಗೆ ಮೈಸೂರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>