ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ‘ಕುಮಾರಸ್ವಾಮಿ ಬಳಿ ಕೆಲವು ಗ್ರಹಗಳು ಸೇರಿಕೊಂಡಿದ್ದವು. ಈಗ ಅವೆಲ್ಲವೂ ಹೋಗಿ ಡಿ.ಕೆ. ಶಿವಕುಮಾರ್ ಬಳಿ ಸೇರಿಕೊಳ್ಳುತ್ತಿವೆ. ಗ್ರಹಗಳೆಲ್ಲ ಬಿಟ್ಟು ಹೋಗಿ ಪಕ್ಷಕ್ಕೆ ಒಳ್ಳೆಯದಾಗಲಿದೆ. ಇದರಿಂದ ಜೆಡಿಎಸ್ಗೆ ಯಾವ ತೊಂದರೆಯೂ ಆಗುವುದಿಲ್ಲ. ಕುಮಾರಸ್ವಾಮಿ ಅನುಭವಿಸಿದ್ದನ್ನು ಡಿ.ಕೆ. ಶಿವಕುಮಾರ್ ಅವರೂ ಸ್ವಲ್ಪ ಅನುಭವಿಸಲಿ’ ಎಂದು ಹೇಳಿದರು.