ಬೆಂಗಳೂರು: ‘ಒಡೆದು ಹೋದ ಹಾಲು, ಮನಸ್ಸು ಮತ್ತೆ ಒಂದಾಗಲು ಸಾಧ್ಯವೇ ಇಲ್ಲ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಪಕ್ಷ ತ್ಯಜಿಸಿದವರೂ ಸೇರಿದಂತೆ ಎಲ್ಲ ರಿಗೂ ಕಾಂಗ್ರೆಸ್ ಸೇರಲು ಡಿ.ಕೆ. ಶಿವ ಕುಮಾರ್ ಆಹ್ವಾನ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅಂತಹ ಜರೂ ರತ್ತು ಇಲ್ಲ. ಈಗಾಗಲೇ ವಿಚ್ಛೇದನ ಪಡೆದು ಬಂದಾಗಿದೆ. ಮತ್ತೆ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದರು.
‘ಕಾಂಗ್ರೆಸ್ಗೆ ಹಳೆ ಗಂಡನ ಪಾದವೇ ಗತಿ ಎಂಬಂತೆ ಕರೆಯುತ್ತಿದ್ದಾರೆ. ಇಲ್ಲಿ (ಬಿಜೆಪಿ) ನಾವು ಚೆನ್ನಾಗಿದ್ದೇವೆ. ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ವೀರಾವೇಶ ದಿಂದ ಮಾತನಾಡಿರುವುದನ್ನು ಕೇಳಿ ದ್ದೇವೆ. ಅದಾದ ಮೇಲೂ ನಾವು ಯಾಕೆ ಹೋಗುತ್ತೇವೆ’ ಎಂದು ತಿರುಗೇಟು ನೀಡಿದರು.