ಟಿ.ಎಸ್.ನಾಗಾಭರಣ, ‘ಕನ್ನಡ, ಕನ್ನಡಿಗ, ಕರ್ನಾಟಕ ಎಂಬ ತ್ರಿವಳಿ ಮಂತ್ರದಡಿ ಕಾರ್ಯನಿರ್ವಹಿಸುತ್ತಿರುವ ಪ್ರಾಧಿಕಾರ, ಕನ್ನಡಿಗರ ಅಭ್ಯುದಯಕ್ಕಾಗಿ ಈ ಮಸೂದೆಯನ್ನು ತಯಾರಿಸಿದೆ. ರಾಜ್ಯದ ಎಲ್ಲೆಡೆ ಕನ್ನಡ ರಾರಾಜಿಸಬೇಕು. ಎಲ್ಲ ವಲಯಗಳಲ್ಲೂ ಕನ್ನಡಿಗರಿಗೆ ಪ್ರಥಮ ಆದ್ಯತೆ ದೊರೆಯಬೇಕು. ಈ ಆಶಯಗಳನ್ನು ಮಸೂದೆ ಸಾಕಾರಗೊಳಿಸಲಿದೆ’ ಎಂದು ಹೇಳಿದರು.