ಧರಣಿ ಕಾರಣಕ್ಕೆ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು. ಕೂಗಾಟದ ಮಧ್ಯೆ ಮೂರು ಮಸೂದೆ
ಗಳಿಗೆ ಅಂಗೀಕಾರ ಪಡೆದಿದ್ದು ಬಿಟ್ಟರೆ ಉಳಿದ ಕಲಾಪವನ್ನು ಗದ್ದಲವೇ ತಿಂದುಬಿಟ್ಟಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಉಸ್ತುವಾರಿಯಲ್ಲಿ ‘ಸ್ವತಂತ್ರ ತನಿಖೆ’ ನಡೆಸಬೇಕು ಎಂಬ ಸೋಮವಾರದ ಪಟ್ಟನ್ನು ಸಡಿಲಿಸಿದ ಕಾಂಗ್ರೆಸ್, ಎಸ್ಐಟಿ ತನಿಖೆ ನಡೆಯಲಿ, ಆದರೆ ಮೇಲುಸ್ತುವಾರಿ ಹೈಕೋರ್ಟ್ ನ್ಯಾಯಮೂರ್ತಿ ಅವರದ್ದೇ ಆಗಿರಬೇಕು ಒಂದು ಒತ್ತಾಯಿಸಿತು. ಸರ್ಕಾರ ಅದಕ್ಕೆ ಒಪ್ಪಲಿಲ್ಲ. ಸಂತಾಪ ಸೂಚನೆ ಮುಗಿಯುತ್ತಿದ್ದಂತೆ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದ ಕಾಂಗ್ರೆಸ್ ಸದಸ್ಯರು, ಸಿ.ಡಿಗಳನ್ನು ಪ್ರದರ್ಶಿಸಿ ಘೋಷಣೆ ಕೂಗಲು ಆರಂಭಿಸಿದರು.