ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಗಂಗಾ ಕಲ್ಯಾಣ ಯೋಜನೆ ಯಲ್ಲಿ 14,537 ಕೊಳವೆ ಬಾವಿ ಮಂಜೂರಾಗಿದ್ದು, ಅದರಲ್ಲಿ ಅವ್ಯವ ಹಾರ ನಡೆದಿದೆ. ಈ ತನಿಖೆಯನ್ನು ಆರ್ಡಿಪಿಆರ್ ಇಲಾಖೆಯ ಎಂಜಿನಿ ಯರ್ಗೆ ವಹಿಸಲಾಗಿದ್ದು, 15 ದಿನಗಳಲ್ಲಿ ವರದಿ ಬರಬೇಕಿತ್ತು. ದೇವರಾಜ ಅರಸು ನಿಗಮದಲ್ಲಿ ಒಂದು ಕೊಳವೆ ಬಾವಿ ಕೊರೆಯಲು ₹ 93 ಲಕ್ಷ ಬಿಲ್ ಮಾಡಲಾಗುತ್ತಿದೆ. ಆದರೆ, ಅಂಬೇಡ್ಕರ್, ಆದಿ ಜಾಂಬವ ನಿಗಮದಲ್ಲಿ ಅದೇ ಕೊಳವೆ ಬಾವಿ ಕೊರೆಯಲು ₹ 1.83 ಲಕ್ಷ ವೆಚ್ಚ ಮಾಡ ಲಾಗುತ್ತಿದೆ’ ಅವರು ದೂರಿದರು.