<p><strong>ಮೈಸೂರು:</strong> ‘ರಾಮನಗರಕ್ಕೂ, ಸಚಿವ ಅಶ್ವತ್ಥನಾರಾಯಣ ಅವರಿಗೂ ಏನು ಸಂಬಂಧ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.</p>.<p>‘ಅಲ್ಲಿಗೆ ಸುಳ್ಳು ಹೇಳಲು ಹೋಗಿರಬೇಕು. ಅಲ್ಲಿನ ವಿಚಾರ ಮಾತನಾಡಲು ಅಶ್ವತ್ಥನಾರಾಯಣ ಯಾರು? ನಮ್ಮನ್ನು ಇದುವರೆಗೆ ಸೌಜನ್ಯಕ್ಕೂ ಮಾತನಾಡಿಸಿಲ್ಲ. ಅವರೇನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಹೇಳಲಿ’ ಎಂದುಸವಾಲೆಸೆದರು.</p>.<p><a href="https://www.prajavani.net/karnataka-news/cn-ashwath-narayan-dk-suresh-basavaraj-bommai-politics-bjp-congress-ramanagara-898615.html" itemprop="url">ರಾಮನಗರ ಘಟನೆ: ರೌಡಿ ಸಹೋದರನ ಅಟ್ಟಹಾಸ ಎಂದ ಬಿಜೆಪಿ </a></p>.<p>‘ರಾಜಕೀಯ ಏನೇ ಇರಲಿ ಎಚ್.ಡಿ.ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆ ಮಾಡಿದರು. ಜಿಲ್ಲಾ ಕೇಂದ್ರದಲ್ಲಿ ಒಂದಷ್ಟು ಕಟ್ಟಡ ಕಟ್ಟಿಸಿದ್ದರು. ಆದರೆ, ಅಲ್ಲಿ ಪ್ರತಿಮೆಗಳನ್ನು ನಿರ್ಮಿಸಿದ್ದು ನಾವು’ ಎಂದರು.</p>.<p>‘ವೃಷಭಾವತಿ ನದಿಯನ್ನು ಸ್ವಚ್ಛಗೊಳಿಸಿದ್ದರೆ ಹೇಳಲಿ. ಯಾವುದಾದರೂ ಕಟ್ಟಡ ಕಟ್ಟಿಸಿದ್ದರೆ ತೋರಿಸಲಿ. ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರವನ್ನಾದರೂ ನೀಡಿದ್ದರೆ ತಿಳಿಸಲಿ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ರಾಮನಗರಕ್ಕೂ, ಸಚಿವ ಅಶ್ವತ್ಥನಾರಾಯಣ ಅವರಿಗೂ ಏನು ಸಂಬಂಧ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.</p>.<p>‘ಅಲ್ಲಿಗೆ ಸುಳ್ಳು ಹೇಳಲು ಹೋಗಿರಬೇಕು. ಅಲ್ಲಿನ ವಿಚಾರ ಮಾತನಾಡಲು ಅಶ್ವತ್ಥನಾರಾಯಣ ಯಾರು? ನಮ್ಮನ್ನು ಇದುವರೆಗೆ ಸೌಜನ್ಯಕ್ಕೂ ಮಾತನಾಡಿಸಿಲ್ಲ. ಅವರೇನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಹೇಳಲಿ’ ಎಂದುಸವಾಲೆಸೆದರು.</p>.<p><a href="https://www.prajavani.net/karnataka-news/cn-ashwath-narayan-dk-suresh-basavaraj-bommai-politics-bjp-congress-ramanagara-898615.html" itemprop="url">ರಾಮನಗರ ಘಟನೆ: ರೌಡಿ ಸಹೋದರನ ಅಟ್ಟಹಾಸ ಎಂದ ಬಿಜೆಪಿ </a></p>.<p>‘ರಾಜಕೀಯ ಏನೇ ಇರಲಿ ಎಚ್.ಡಿ.ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆ ಮಾಡಿದರು. ಜಿಲ್ಲಾ ಕೇಂದ್ರದಲ್ಲಿ ಒಂದಷ್ಟು ಕಟ್ಟಡ ಕಟ್ಟಿಸಿದ್ದರು. ಆದರೆ, ಅಲ್ಲಿ ಪ್ರತಿಮೆಗಳನ್ನು ನಿರ್ಮಿಸಿದ್ದು ನಾವು’ ಎಂದರು.</p>.<p>‘ವೃಷಭಾವತಿ ನದಿಯನ್ನು ಸ್ವಚ್ಛಗೊಳಿಸಿದ್ದರೆ ಹೇಳಲಿ. ಯಾವುದಾದರೂ ಕಟ್ಟಡ ಕಟ್ಟಿಸಿದ್ದರೆ ತೋರಿಸಲಿ. ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರವನ್ನಾದರೂ ನೀಡಿದ್ದರೆ ತಿಳಿಸಲಿ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>