ಇದಕ್ಕೆ ಮಾಧುಸ್ವಾಮಿ ಅವರು, ‘ಇವೆಲ್ಲವೂ ನನಗೆ ಗೊತ್ತಪ್ಪ. ನಿಮ್ಮೂರಲ್ಲಿ ಒಂದೇ ಅಲ್ಲ. ರಾಜ್ಯದ ಎಲ್ಲ ಕಡೆ ನಡೀತಾ ಇದೆ. ಸನ್ಮಾನ್ಯ ಸಚಿವ ಸೋಮಶೇಖರ್ ಅವರ ಗಮನಕ್ಕೂ ತಂದಿದ್ದೇವೆ. ಬಡ್ಡಿ ಹೊಡೆದುಕೊಂಡು ತಿಂತಾ ಇದ್ದಾರೆ. ಅಡಿಶನಲ್ ಸೆಸ್ ಅಂತ
ಹಾಕ್ತಾ ಇದ್ದಾರೆ. ಬಡ್ಡಿ ವಸೂಲಿ ಮಾಡ್ತಿದ್ದಾರೆ ಎಂದೂ ಹೇಳಿದ್ದೇನೆ. ಕ್ರಮ ಜರುಗಿಸ್ತಾ ಇಲ್ಲ, ನಾವೇನು ಮಾಡಾಣ. ರೈತರಲ್ಲ, ನಾನೇ ಕಟ್ಟಿದ್ದೇನೋ ಮಾರಾಯ. ನಂತಾವ್ಲೇ ತಗಂಡ್ರಲ್ಲ’ ಎಂದೂ ಅವರು ಹೇಳುತ್ತಾರೆ.