ಬೆಂಗಳೂರು: ದೇಶ, ಸಂವಿಧಾನ, ತ್ರಿವರ್ಣ ಧ್ವಜವನ್ನು ಬಿಜೆಪಿ ಸದಾ ಅವಮಾನಿಸಿಕೊಂಡೇ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಸಚಿವ ಕೆ.ಎಸ್. ಈಶ್ವರಪ್ಪ ನೀಡಿದ್ದ ಹೇಳಿಕೆ ಎರಡು ದಿನಗಳಿಂದ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್– ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಇದೀಗ ತ್ರಿವರ್ಣ ಧ್ವಜ ವಿಷಯವನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದೇಶದಲ್ಲಿ ತ್ರಿವರ್ಣ ಧ್ವಜಕ್ಕೆ ಅಪರಿಮಿತ ಗೌರವವಿದೆ. ಆದರೆ, ಬಿಜೆಪಿಯವರಿಗೆ ಅಸಹನೆ ಇದೆ. ದೇಶದ ಪ್ರಧಾನಿಯಾದವರು ತ್ರಿವರ್ಣ ಧ್ವಜದಲ್ಲಿ ಮುಖ ಒರೆಸಿಕೊಳ್ಳುವ ಮೂಲಕ ಆರ್ಎಸ್ಎಸ್ನ ರಾಷ್ಟ್ರಧ್ವಜದ ದ್ವೇಷವನ್ನು ವ್ಯಕ್ತಪಡಿಸಿದ್ದರು. ಈಗ ಈಶ್ವರಪ್ಪನವರ ಸರದಿ’ ಎಂದು ವಾಗ್ದಾಳಿ ನಡೆಸಿದೆ.
‘ರಾಷ್ಟ್ರಧ್ವಜವನ್ನು ಬದಲಿಸುತ್ತೇವೆ ಎಂಬ ಈಶ್ವರಪ್ಪನವರ ದೇಶದ್ರೋಹಿ ಹೇಳಿಕೆಯನ್ನು ಬೆಂಬಲಿಸುವ ಬಿಜೆಪಿಯವರು ಧ್ವಜ ಪ್ರದರ್ಶಿಸಿದ ಕಾಂಗ್ರೆಸ್ಗೆ ಗೌರವಿಸುವ ಪಾಠ ಮಾಡುವುದು ನರಿಗಳು ನ್ಯಾಯ ಹೇಳಿದಂತೆಯೇ ಸರಿ. ದೇಶಕ್ಕೆ, ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವಿಸುವುದನ್ನು ಮೊದಲು ಬಿಜೆಪಿಯವರು ಕಲಿಯಬೇಕಿದೆ’ ಎಂದು ಕಾಂಗ್ರೆಸ್ ಗುಡುಗಿದೆ.
ದೇಶ, ಸಂವಿಧಾನ, ತ್ರಿವರ್ಣ ಧ್ವಜಗಳನ್ನು ಸದಾ ಅವಮಾನಿಸಿಕೊಂಡೇ ಬಂದಿದೆ ಬಿಜೆಪಿ.
— Karnataka Congress (@INCKarnataka) February 17, 2022
ದೇಶದಲ್ಲಿ ತ್ರಿವರ್ಣಕ್ಕೆ ಅಪರಿಮಿತ ಗೌರವವಿದೆ, ಆದರೆ ಬಿಜೆಪಿಗರಿಗೆ ಅಸಹನೆ ಇದೆ, ದೇಶದ ಪ್ರಧಾನಿಯಾದವರು ತ್ರಿವರ್ಣದಲ್ಲಿ ಮುಖ ಒರೆಸಿಕೊಳ್ಳುವ ಮೂಲಕ RSSನ ರಾಷ್ಟ್ರಧ್ವಜದ ದ್ವೇಷವನ್ನು ವ್ಯಕ್ತಪಡಿಸಿದ್ದರು. ಈಗ ಈಶ್ವರಪ್ಪನವರ ಸರದಿ.#DeshadrohiBJP pic.twitter.com/Gm6HMWMSaH
ರಾಷ್ಟ್ರಧ್ವಜವನ್ನು ಬದಲಿಸುತ್ತೇವೆ ಎಂಬ ಈಶ್ವರಪ್ಪನವರ ದೇಶದ್ರೋಹಿ ಹೇಳಿಕೆಯನ್ನು ಬೆಂಬಲಿಸುವ ಬಿಜೆಪಿಯವರು ಧ್ವಜ ಪ್ರದರ್ಶಿಸಿದ ಕಾಂಗ್ರೆಸ್ಗೆ ಗೌರವಿಸುವ ಪಾಠ ಮಾಡುವುದು ನರಿಗಳು ನ್ಯಾಯ ಹೇಳಿದಂತೆಯೇ ಸರಿ!
— Karnataka Congress (@INCKarnataka) February 17, 2022
ದೇಶಕ್ಕೆ, ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವಿಸುವುದನ್ನು ಮೊದಲು @BJP4Karnataka ಕಲಿಯಬೇಕಿದೆ.#DeshadrohiBJP pic.twitter.com/W1y1ILUmrt
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.