ಮಂಗಳವಾರ ಶ್ರೀನಿವಾಸ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಶಾಸಕ ಸಾ.ರಾ.ಮಹೇಶ್ ಅವರು ಮತ್ತೆ ಜೆಡಿಎಸ್ಗೆ ಮರಳುವಂತೆ ಆಹ್ವಾನ ನೀಡಿದ್ದರು. ಅದಕ್ಕೆ ಬುಧವಾರ ಕಡಬದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿದ ಶ್ರೀನಿವಾಸ್, ‘ಜೆಡಿಎಸ್ ಶಾಸಕರಾದ ಸಾ.ರಾ. ಮಹೇಶ್ ಮತ್ತು ಡಾ.ಕೆ.ಅನ್ನದಾನಿ ಅವರು ಜೆಡಿಎಸ್ಗೆ ಮರಳುವಂತೆ ವಿಶ್ವಾಸದಿಂದ ಕರೆದಿದ್ದಾರೆ. ಆದರೆ, ನನಗೆ ಅಂತಹ ಮನಸ್ಥಿತಿ ಇಲ್ಲ’ ಎಂದು ಸ್ಪಷ್ಟಪಡಿಸಿದರು.