ಮುದ್ರಾಂಕ ಶುಲ್ಕ ನಷ್ಟವಾಗುತ್ತಿರುವ ಬಗ್ಗೆ ವಿಧಾನ ಪರಿಷತ್ನಲ್ಲಿ ಪ್ರಶ್ನೆ ಕೇಳಿದ ಬಿಜೆಪಿಯ ಎನ್. ರವಿಕುಮಾರ್, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಮೋದಿಸಿರುವ ಮಾಗಡಿ ರಸ್ತೆಯ ಕಾವೇರಿಪುರ, ಮಾರುತಿ ನಗರ, ಮೀನಾಕ್ಷಿ ನಗರ, ರಂಗನಾಥಪುರ ಮತ್ತು ಸಣ್ಣಕ್ಕಿ ಬಯಲು ಪ್ರದೇಶಗಳ 337 ಮಾರಾಟ ಪತ್ರಗಳ ನೋಂದಣಿಯಿಂದ ₹ 103.39 ಕೋಟಿ ನಷ್ಟವಾಗಿದೆ. ಬೆಳಗಾವಿ ವಿಭಾಗದಲ್ಲೂ ಇದೇ ರೀತಿಯ ಪ್ರಕರಣ ನಡೆದಿದೆ’ ಎಂದು ಹೇಳಿದರು.