ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್. ಅಶೋಕ್ ಹೃದಯ ಗೆದ್ದ ಜನಪದ ಗೀತೆ, ನೃತ್ಯ,‌ ಸಂಗ್ಯಾ ಬಾಳ್ಯಾ ನಾಟಕ

Last Updated 20 ಮಾರ್ಚ್ 2021, 17:04 IST
ಅಕ್ಷರ ಗಾತ್ರ

ಛಬ್ಬಿ (ಹುಬ್ಬಳ್ಳಿ): ಕಂದಾಯ ಸಚಿವ ಆರ್. ಅಶೋಕ ಅವರ ಗ್ರಾಮ ವಾಸ್ತವ್ಯ ಹಾಗೂ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ರಂಗಾಯಣದಿಂದ ಪ್ರಸ್ತುತ ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಛಬ್ಬಿ ಗ್ರಾಮ ವಾಸ್ತವ್ಯಕ್ಕೆ ಮೆರುಗು ತಂದವು.

ಹರ್ಲಾಪೂರದ ಸಿ.ವೈ.ಸಿ.ಡಿ ತಂಡವು ಮಾನವೀಯ ಮೌಲ್ಯಗಳನ್ನು ಸಾರುವ ಜಾನಪದ ಮತ್ತು ಜಾಗೃತಗೀತೆಗಳನ್ನು ಪ್ರಸ್ತುತ ಪಡಿಸಿತು.

ಜನಪದ ನೃತ್ಯ, ಚಿಕ್ಕ ಮಕ್ಕಳ ನೃತ್ಯ ಹಾಗೂ ಗ್ರಾಮದ ಮಹಿಳೆಯರು ಭಜನೆ ಗೀತೆ ಹಾಡಿದರು. ಸಿರಿ ಅವರಿಂದ ಭರತನಾಟ್ಯ ಹಾಗೂ ಸೋಬಾನ ಗೀತೆಗಳು ಕಾರ್ಯಕ್ರಮಕ್ಕೆ ಹುರುಪು ತಂದವು.

ಗ್ರಾಮದ ಕಲಾತಂಡ ಸಂಗ್ಯಾ ಬಾಳ್ಯ ನಾಟಕ ಪ್ರಸ್ತುತ ಪಡಿಸಿತು. ಜಾನಪದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಜನಪದ ನೃತ್ಯ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯಿಂದ ಜಾಗೃತಿ ಬೀದಿ ನಾಟಕ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT