ವೇತನಕ್ಕೆ ಅಗತ್ಯ ಇರುವ ₹640.61 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ನಾಲ್ಕು ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಕೆಎಸ್ಆರ್ಟಿಸಿ, ವಾಯವ್ಯ ಕರ್ನಾಟಕ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಗಾಗಿ ಶೇ 25ರಷ್ಟು ಅಂದರೆ ₹61.82 ಕೋಟಿ ಮತ್ತು ಬಿಎಂಟಿಸಿಗೆ ಶೇ 50ರಷ್ಟು ಅಂದರೆ ₹49.31 ಕೋಟಿ ಸಹಾಯಧನ ಬಿಡುಗಡೆ ಮಾಡಿದೆ.