<p><strong>ಬೆಂಗಳೂರು:</strong> ಕಥಾ ಸಂಕಲನದ ಹಸ್ತಪ್ರತಿಗೆ ‘ಛಂದ ಪುಸ್ತಕ’ವು ನೀಡುವ ಬಹುಮಾನಕ್ಕೆ 2022ನೇ ಸಾಲಿನಲ್ಲಿ ಫಾತಿಮಾ ರಲಿಯಾ ಅವರ ಅಪ್ರಕಟಿತ ಕೃತಿ ಆಯ್ಕೆಯಾಗಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಈ ಬಹುಮಾನ ಸ್ವೀಕರಿಸಲು ಫಾತಿಮಾ ನಿರಾಕರಿಸಿದ್ದಾರೆ.</p>.<p>ದಕ್ಷಿಣ ಕನ್ನಡದ ಪೆರ್ನೆ ಗ್ರಾಮದ ಕತೆಗಾರ್ತಿ ಫಾತಿಮಾ, ಸದ್ಯ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸವಿದ್ದಾರೆ. ಇವರು ಎಂಬಿಎ ಪದವೀಧರರು. ‘ವೈಯಕ್ತಿಕ ಕಾರಣಕ್ಕೆ ಬಹುಮಾನ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇನೆ. ಈ ವಿಷಯವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.</p>.<p>‘ಫಾತಿಮಾ ಖಾಸಗಿ ಕಾರಣಗ ಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಅವರ ಆಯ್ಕೆ ಸ್ವಾತಂತ್ರ್ಯವನ್ನು ಛಂದ ಪುಸ್ತಕ ಗೌರವಿಸುತ್ತದೆ. ಮುಂದಿನ 4 ವಾರಗಳಲ್ಲಿ ನಮ್ಮ ಪರ್ಯಾಯ ಯೋಜನೆಯನ್ನು ತಿಳಿಸುತ್ತೇವೆ. ಛಂದದ ಓದುಗರಿಗೆ ಹೀಗೆ ಗೊಂದಲ ಉಂಟು ಮಾಡುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಛಂದ ಪುಸ್ತಕ ಪ್ರಕಾಶಕರೂ ಆಗಿರುವ ಸಾಹಿತಿ ವಸುಧೇಂದ್ರ ಗುರುವಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಥಾ ಸಂಕಲನದ ಹಸ್ತಪ್ರತಿಗೆ ‘ಛಂದ ಪುಸ್ತಕ’ವು ನೀಡುವ ಬಹುಮಾನಕ್ಕೆ 2022ನೇ ಸಾಲಿನಲ್ಲಿ ಫಾತಿಮಾ ರಲಿಯಾ ಅವರ ಅಪ್ರಕಟಿತ ಕೃತಿ ಆಯ್ಕೆಯಾಗಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಈ ಬಹುಮಾನ ಸ್ವೀಕರಿಸಲು ಫಾತಿಮಾ ನಿರಾಕರಿಸಿದ್ದಾರೆ.</p>.<p>ದಕ್ಷಿಣ ಕನ್ನಡದ ಪೆರ್ನೆ ಗ್ರಾಮದ ಕತೆಗಾರ್ತಿ ಫಾತಿಮಾ, ಸದ್ಯ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸವಿದ್ದಾರೆ. ಇವರು ಎಂಬಿಎ ಪದವೀಧರರು. ‘ವೈಯಕ್ತಿಕ ಕಾರಣಕ್ಕೆ ಬಹುಮಾನ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇನೆ. ಈ ವಿಷಯವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.</p>.<p>‘ಫಾತಿಮಾ ಖಾಸಗಿ ಕಾರಣಗ ಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಅವರ ಆಯ್ಕೆ ಸ್ವಾತಂತ್ರ್ಯವನ್ನು ಛಂದ ಪುಸ್ತಕ ಗೌರವಿಸುತ್ತದೆ. ಮುಂದಿನ 4 ವಾರಗಳಲ್ಲಿ ನಮ್ಮ ಪರ್ಯಾಯ ಯೋಜನೆಯನ್ನು ತಿಳಿಸುತ್ತೇವೆ. ಛಂದದ ಓದುಗರಿಗೆ ಹೀಗೆ ಗೊಂದಲ ಉಂಟು ಮಾಡುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಛಂದ ಪುಸ್ತಕ ಪ್ರಕಾಶಕರೂ ಆಗಿರುವ ಸಾಹಿತಿ ವಸುಧೇಂದ್ರ ಗುರುವಾರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>