ಭದ್ರಾವತಿ ತಾಲ್ಲೂಕಿನ ಹೊಳೆ ಹೊನ್ನೂರು ಸಮೀಪದ ಹೊಸಕೊಪ್ಪದ ಎಸ್.ವಿ.ಶರಣ್ ಬೆಂಗಳೂರಿನ ಪ್ರವಾಸೋದ್ಯಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ಲಾಕ್ಡೌನ್ ಸಮಯದಲ್ಲಿ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ಸ್ವತಃ ಸಂಸ್ಕೃತಿ ಫೌಂಡೇಷನ್ ಸ್ಥಾಪಿಸಿ, ಶಿವಮೊಗ್ಗದ ವಿವಿಧ ಸೇವಾ ಸಂಸ್ಥೆಗಳ ಜತೆ ಸೇರಿಕೊಂಡು ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದರು. ಎರಡನೇ ಲಾಕ್ಡೌನ್ ಸಮಯದಲ್ಲೂ 10 ಸಾವಿರ ಜನರಿಗೆ ಮಾಸ್ಕ್, ಸ್ಯಾನಿಟೈಸರ್, ದಿನಸಿ ಸಾಮಗ್ರಿ ವಿತರಿಸಿದ್ದರು. ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸೋಂಕು ತಗುಲಿದ್ದ ಹಲವರ ಜೀವ ಉಳಿಸಿದ್ದ ಅವರೇ ಸೋಂಕಿಗೆ ಒಳಗಾಗಿ ಜೀವ ಕಳೆದುಕೊಂಡಿದ್ದಾರೆ. ಒಬ್ಬಳೇ ಪುತ್ರಿ ಸಮ್ಯಾ ಅನಾಥವಾಗಿದ್ದಾಳೆ.