ದಲಿತ ಮಾದಿಗ ಸಮನ್ವಯ ಸಮಿತಿಯು ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಸಮುದಾಯದ ನೂತನ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಪಮಾನ, ಹಸಿವು ಎಲ್ಲವನ್ನೂ ಮಾದಿಗ ಸಮಾಜ ಶತಮಾನಗಳಿಂದ ಅನುಭವಿಸುತ್ತಿದೆ. ಈಗಲಾದರೂ ಅಧಿಕಾರ ನಮ್ಮ ಸಮುದಾಯಕ್ಕೆ ಸಿಗಬೇಕು. ಆ ಅಧಿಕಾರ ಕೊಡುವ ಮುಖಂಡರ ಬೆನ್ನಿಗೆ ಸಮುದಾಯ ನಿಲ್ಲಲಿದೆ’ ಎಂದರು.