ಬೆಂಗಳೂರು: ನೆರೆ ಸಂತ್ರಸ್ತರ ಕರೆ ಬಂದರೆ ತಲೆನೋವು ಎಂದಿರುವ ಬಿಜೆಪಿ ಶಾಸಕ ಮಹೇಶ್ ಕುಮಠಳ್ಳಿ ಮಾತು ಇಡೀ ಬಿಜೆಪಿ ಧೋರಣೆಯನ್ನು ಬಿಂಬಿಸುತ್ತದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಕಷ್ಟದ ಸಮಯದಲ್ಲಿ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದೆಹಲಿಯಲ್ಲಿ ಕುರ್ಚಿ ಲಾಬಿ ನಡೆಸಲು ಹೋಗಿರುವ ಬಿಜೆಪಿ ನಾಯಕರಿಗೆ ಅಧಿಕಾರ ಲಾಲಸೆ ಒಂದೇ ಅಜೆಂಡಾ' ಎಂದು ಹರಿಹಾಯ್ದಿದೆ.
'ನೆರೆ ಸಂತ್ರಸ್ತರ ಕರೆ ಬಂದರೆ ತಲೆನೋವು ಎಂದು ಹೇಳಿರುವ ಬಿಜೆಪಿ ಶಾಸಕ ಮಹೇಶ್ ಕುಮಠಳ್ಳಿ ಮಾತು ಇಡೀ ಬಿಜೆಪಿ ಧೋರಣೆಯನ್ನು ಬಿಂಬಿಸುತ್ತದೆ' ಎಂದೂ ಕಾಂಗ್ರೆಸ್ ಟೀಕಿಸಿದೆ.
ನೆರೆ ಸಂತ್ರಸ್ತರ ಕರೆ ಬಂದರೆ ತಲೆನೋವು ಎಂದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಮಾತು ಇಡೀ @BJP4Karnataka ಧೋರಣೆಯನ್ನು ಬಿಂಬಿಸುತ್ತದೆ.
ಕಷ್ಟದ ಸಮಯದಲ್ಲಿ ಸರ್ಕಾರವಿಲ್ಲದೆ ನೆರೆ ಸಂತ್ರಸ್ತರನ್ನು ನಡುನೀರಲ್ಲಿ ಕೈಬಿಟ್ಟು ದೆಹಲಿಯಲ್ಲಿ ಕುರ್ಚಿ ಲಾಬಿ ನಡೆಸಲು ಹೋಗಿರುವ ಬಿಜೆಪಿ ನಾಯಕರಿಗೆ ಅಧಿಕಾರ ಲಾಲಸೆ ಒಂದೇ ಅಜೆಂಡಾ.#ಜನವಿರೋಧಿಬಿಜೆಪಿ
‘ನಾನು ನಿಮ್ಮ ಮುಂದೆ ಕುಳಿತಿದ್ದೇನೆ. ತಲೆ ಬ್ಯಾರೆ ಬ್ಯಾರೆ ಕಡೆಯೇ ಇದೆ. ಕರೆ ಬಂದರೆ ಸಾಕು ಮೊಬೈಲ್ ಫೋನ್ ಒಗಿಲೇನ ಅನ್ನಿಸ್ತೈತಿ. ಮೈಯೆಲ್ಲಾ ಬಿಗಿದಂಗಾಗೈತಿ. ಒಂದ್ ಕಡೆ ಹೊತಕೊಂಡ ಮಕ್ಕೊಬೇಕು ಅನ್ನಿಸ್ತೈತಿ’ ಎಂದು ಅಥಣಿಯ ಬಿಜೆಪಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ವೈರಲ್ ಆಗಿದೆ.