ಈ ಕುರಿತ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಸಚಿವ ಅಶ್ವತ್ಥ ನಾರಾಯಣ, ‘ನಾಡಪ್ರಭು ಕೆಂಪೇಗೌಡರು ಮತ್ತು ಪ್ರಧಾನಿ ಮೋದಿ ಅವರ ನಡುವೆ ಅನೇಕ ಸಾಮ್ಯತೆಗಳಿವೆ. ಇಬ್ಬರೂ ದಾರ್ಶನಿಕರು ಮತ್ತು ಅನುಷ್ಠಾನ ಕಾರ್ಯದಲ್ಲಿ ಮೇರು ವ್ಯಕ್ತಿತ್ವಗಳು. ರೂಪಾಂತರ, ಸುಧಾರಣೆ ಮತ್ತು ನಂಬುಗೆಗಳಲ್ಲಿ ಇಬ್ಬರೂ ದೃಢವಾಗಿ ವಿಶ್ವಾಸವಿಟ್ಟವರಾಗಿದ್ದಾರೆ. ಇವರು ನಿಜವಾದ ಧರ್ಮಕರ್ಮಾಧಿಪತಿಗಳು’ ಎಂದು ಹೇಳಿದ್ದಾರೆ.