ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ಉಪಚುನಾವಣೆ ಸದ್ಯವೇ ಘೋಷಣೆ ಆಗುವ ಸಾಧ್ಯತೆ ಇರುವುದರಿಂದ ಆ ಕ್ಷೇತ್ರಗಳ ನಾಡಿ ಮಿಡಿತ ಅರಿಯುವ ಉದ್ದೇಶದಿಂದ ವಿಜಯೇಂದ್ರ ಎರಡೂ ಕ್ಷೇತ್ರಗಳಲ್ಲಿ ಶುಕ್ರವಾರದಿಂದ ಪ್ರವಾಸ ಕೈಗೊಂಡಿದ್ದಾರೆ. ಮಸ್ಕಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ ಅವರು ಮೈತ್ರಿಸರ್ಕಾರವನ್ನು ಪತನಗೊಳಿಸಿದ ಶಾಸಕರ ಪೈಕಿ ಒಬ್ಬರಾಗಿದ್ದು, ಬಳಿಕ ಅವರು ಬಿಜೆಪಿ ಸೇರಿದರು. ಬಸವಕಲ್ಯಾಣ ಶಾಸಕ ನಾರಾಯಣರಾವ್ ಅವರು ಕೋವಿಡ್ನಿಂದ ಮೃತಪಟ್ಟ ಕಾರಣ ಅಲ್ಲಿ ಉಪಚುನಾವಣೆ ನಡೆಯಬೇಕಿದೆ.