‘ಶಿಕ್ಷಣ ಹಾಗೂ ಅನ್ನದಾಸೋಹಕ್ಕೆ ಆದ್ಯತೆ ನೀಡಿದ್ದ ಮಠಗಳ ಬಗ್ಗೆ ಸಮಾಜದಲ್ಲಿ ಅನ್ಯ ಭಾವನೆ ಮೂಡುತ್ತಿದೆ. ಮಠದ ಆಸ್ತಿಯನ್ನುಅನೇಕ ಪೀಠಾಧ್ಯಕ್ಷರು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಠ ಭಕ್ತರ ಸ್ವತ್ತೇ ಹೊರತು ಪೀಠಾಧ್ಯಕ್ಷರದ್ದಲ್ಲ. ಮಠದ ವ್ಯವಸ್ಥೆ ಹಾಳಾಗಲು ಮಹಾಸಭಾ ಬಿಡುವುದಿಲ್ಲ. ಡಿ.23ರಿಂದ ಮೂರು ದಿನ ದಾವಣಗೆರೆಯಲ್ಲಿ ನಡೆಯುವ ಮಹಾಸಭಾದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು’ ಎಂದರು.