ಆತ್ಮಹತ್ಯೆಯ ಮುನ್ಸೂಚನೆಗಳು, ಸಮಸ್ಯೆಯ ಅಂಶಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡುವುದೂ ಸೇರಿದಂತೆ ದೀರ್ಘಾವಧಿಯ ಕಾರ್ಯತಂತ್ರ ರೂಪಿಸುವುದು ಅಗತ್ಯ. ಕುಟುಂಬಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಒಬ್ಬ ಸದಸ್ಯ ಉಳಿದವರ ಆತ್ಮಹತ್ಯೆಗೆ ಪ್ರೇರೇಪಿಸುವುದು ಸಾಮಾನ್ಯ. ಎಲ್ಲರಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಉದಿಸುವುದಿಲ್ಲ. ಸಮಾಜವನ್ನು ಎದುರಿಸುವುದಕ್ಕೆ ಹಿಂಜರಿಕೆಯುಳ್ಳ ಮತ್ತು ಭಾವನಾತ್ಮಕವಾಗಿ ಟೊಳ್ಳಾದ ವ್ಯಕ್ತಿ ಕುಟುಂಬದ ಉಳಿದ ಸದಸ್ಯರನ್ನೂ ಪ್ರಭಾವಿಸಿ, ಸಾಮೂಹಿಕ ಆತ್ಮಹತ್ಯೆಗೆ ಪ್ರೇರೇಪಿಸುತ್ತಾನೆ. ಉಳಿದವರು ಅವರ ಹಾದಿಯನ್ನೇ ತುಳಿಯುತ್ತಾರೆ. ಆತ್ಮಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ನಿಮ್ಹಾನ್ಸ್ ಈ ವಿಚಾರದಲ್ಲಿ ಸಾಕಷ್ಟು ಕಾರ್ಯನಿರ್ವಹಿಸುತ್ತಿದೆ. ಜೀವನದಲ್ಲಿ ಏರುಪೇರುಗಳು ಇದ್ದೇ ಇರುತ್ತದೆ. ಸಂಕಷ್ಟಕ್ಕೆ ಸಿಲುಕಿದಾಗ ಅದರಿಂದ ಹೊರಗೆ ಬರಲು ಪ್ರಯತ್ನಿಸಬೇಕು. ಇದಕ್ಕೆ ತಜ್ಞರ ನೆರವು ಪಡೆಯುವುದರಲ್ಲಿ ತಪ್ಪಿಲ್ಲ. ಆರ್ಥಿಕ ಮತ್ತು ಕಾನೂನಿನ ಸಮಸ್ಯೆಗಳು ಇದ್ದರೆ, ಸರ್ಕಾರ ಅಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನೂ ಮಾಡಬೇಕು.
(ಸೈಕಿಯಾಟ್ರಿ, ಅಕ್ಯೂಟ್ ಕೇರ್ ಸರ್ವಿಸ್ ವಿಭಾಗ ಮುಖ್ಯಸ್ಥ, ನಿಮ್ಹಾನ್ಸ್ )