<p><strong>ಬೆಂಗಳೂರು: </strong>ಶೃಂಗೇರಿ ತಾಲ್ಲೂಕು ಉಪ ನೋಂದಣಾಧಿಕಾರಿ ಎಚ್.ಎಸ್. ಚೆಲುವರಾಜು ಅವರಿಂದ ಹಣ ಕೇಳಿದ ಆರೋಪ ಎದುರಿಸುತ್ತಿರುವ ಕಂದಾಯ ಸಚಿವ ಆರ್. ಅಶೋಕ ಅವರ ಆಪ್ತ ಸಹಾಯಕ ಗಂಗಾಧರ್ ಅವರನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/budget/budget-size-reduced-by-25-thousand-crore-bommai-799876.html" target="_blank">ಹಣಕ್ಕೆ ಬೇಡಿಕೆ ಇಟ್ಟ ಕಂದಾಯ ಸಚಿವರ ಪಿಎ: ಆರೋಪ</a></p>.<p>ಹಣ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಠಾಣೆಯಲ್ಲಿ ಚೆಲುವರಾಜು ದೂರು ನೀಡಿದ್ದರು. ಗಂಗಾಧರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ವಿಧಾನಸೌಧದ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್, ಅಶೋಕ ಅವರ ಆಪ್ತ ಸಹಾಯಕ ಆಗಿ ನೇಮಕಗೊಂಡಿದ್ದರು. ಹಣ ಕೇಳಿದ ಆರೋಪ ಕಾರಣ ಗಂಗಾಧರ್ ಅವರನ್ನು ಮಾತೃ ಇಲಾಖೆಗೆ ಅಶೋಕ ವಾಪಸು ಕಳುಹಿಸಿದ್ದಾರೆ.</p>.<p>ಜ. 24ರಂದು ಚಿಕ್ಕಮಗಳೂರು ಪ್ರವಾಸವನ್ನು ಅಶೋಕ ಕೈಗೊಂಡಿದ್ದರು. ಅಂದು ಬೆಳಿಗ್ಗೆ ಅಶೋಕ ಅವರ ಆಪ್ತ ಸಹಾಯಕ ಎಂದು ಕರೆ ಮಾಡಿದ್ದ ಗಂಗಾಧರ್, ಹಣ ಕೀಳಲು ಯತ್ನಿಸಿದ್ದರು’ ಎಂದು ದೂರಿಲ್ಲಿ ಚೆಲುವರಾಜು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಶೃಂಗೇರಿ ತಾಲ್ಲೂಕು ಉಪ ನೋಂದಣಾಧಿಕಾರಿ ಎಚ್.ಎಸ್. ಚೆಲುವರಾಜು ಅವರಿಂದ ಹಣ ಕೇಳಿದ ಆರೋಪ ಎದುರಿಸುತ್ತಿರುವ ಕಂದಾಯ ಸಚಿವ ಆರ್. ಅಶೋಕ ಅವರ ಆಪ್ತ ಸಹಾಯಕ ಗಂಗಾಧರ್ ಅವರನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/budget/budget-size-reduced-by-25-thousand-crore-bommai-799876.html" target="_blank">ಹಣಕ್ಕೆ ಬೇಡಿಕೆ ಇಟ್ಟ ಕಂದಾಯ ಸಚಿವರ ಪಿಎ: ಆರೋಪ</a></p>.<p>ಹಣ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಠಾಣೆಯಲ್ಲಿ ಚೆಲುವರಾಜು ದೂರು ನೀಡಿದ್ದರು. ಗಂಗಾಧರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.</p>.<p>ವಿಧಾನಸೌಧದ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್, ಅಶೋಕ ಅವರ ಆಪ್ತ ಸಹಾಯಕ ಆಗಿ ನೇಮಕಗೊಂಡಿದ್ದರು. ಹಣ ಕೇಳಿದ ಆರೋಪ ಕಾರಣ ಗಂಗಾಧರ್ ಅವರನ್ನು ಮಾತೃ ಇಲಾಖೆಗೆ ಅಶೋಕ ವಾಪಸು ಕಳುಹಿಸಿದ್ದಾರೆ.</p>.<p>ಜ. 24ರಂದು ಚಿಕ್ಕಮಗಳೂರು ಪ್ರವಾಸವನ್ನು ಅಶೋಕ ಕೈಗೊಂಡಿದ್ದರು. ಅಂದು ಬೆಳಿಗ್ಗೆ ಅಶೋಕ ಅವರ ಆಪ್ತ ಸಹಾಯಕ ಎಂದು ಕರೆ ಮಾಡಿದ್ದ ಗಂಗಾಧರ್, ಹಣ ಕೀಳಲು ಯತ್ನಿಸಿದ್ದರು’ ಎಂದು ದೂರಿಲ್ಲಿ ಚೆಲುವರಾಜು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>