<p><strong>ಚಿಕ್ಕಮಗಳೂರು:</strong> ‘ಕಂದಾಯ ಸಚಿವ ಆರ್.ಅಶೋಕ ಅವರ ಆಪ್ತ ಸಹಾಯಕ ಎಂದು ಗಂಗಾಧರ್ ಎಂಬಾತ ಪರಿಚಯಿಸಿಕೊಂಡು ಹಣ ಕೀಳಲು ಯತ್ನಿಸಿದರು’ ಎಂದು ಶೃಂಗೇರಿ ತಾಲ್ಲೂಕು ಉಪ ನೋಂದಣಾಧಿಕಾರಿ ಎಚ್.ಎಸ್. ಚೆಲುವರಾಜು ಆರೋಪಿಸಿದ್ದಾರೆ.</p>.<p>‘ಸಚಿವ ಅಶೋಕ ಅವರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕಾರ್ಯಕ್ರಮ ಪಟ್ಟಿ ಇದೇ 20ರಂದು ವಾಟ್ಸ್ಆ್ಯಪ್ಗೆ ಅಪರಿಚಿತ ಫೋನ್ ನಂಬರ್ನಿಂದ ಬಂದಿತ್ತು. 24ರಂದು ಬೆಳಿಗ್ಗೆ 10.30ರ ಹೊತ್ತಿಗೆ ವ್ಯಕ್ತಿಯೊಬ್ಬರು ಫೋನ್ ಮಾಡಿದರು. ಕಂದಾಯ ಸಚಿವ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಮಾತ<br />ನಾಡುತ್ತಿದ್ದೇನೆ. ಸಚಿವರು ಶೃಂಗೇರಿಗೆ ಸಂಜೆ ಬರುತ್ತಾರೆ. ಅಲ್ಲಿ ಬಂದು ನನ್ನನ್ನು ಭೇಟಿ ಮಾಡುವಂತೆ ಅವರು ಸೂಚಿಸಿದರು’ ಎಂದು ಚೆಲುವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಸಚಿವರು ಬಂದಿದ್ದ ಸ್ಥಳಕ್ಕೆ ಹೋಗಿ ಆ ವ್ಯಕ್ತಿಯನ್ನು ಭೇಟಿಯಾದೆ. ಅವರು ಕೊಠಡಿಗೆ ಕರೆದೊಯ್ದರು. ‘ಕೊಡಿ... ಏನು ತಂದಿದ್ದೀರಾ...? ಎಷ್ಟು ತಂದಿದ್ದೀರಾ…?’ ಎಂದು ಕೇಳಿದರು. ಅಂಥ ಅಭ್ಯಾಸ ಎಲ್ಲ ಇಟ್ಟುಕೊಂಡಿಲ್ಲ ಎಂದು ದಬಾಯಿಸಿ ಹೊರಬಂದೆ’ ಎಂದರು.</p>.<p>‘ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಇದೆ. ಮಾರನೇ ದಿನ ಆ ವ್ಯಕ್ತಿ ವಾಟ್ಸ್ಆಪ್ ಕಾಲ್ ಮಾಡಿ, ಹಿಂದಿನ ದಿನ ಏನೂ ನಡೆದೇ ಇಲ್ಲ ಎಂಬಂತೆ ಮಾತನಾಡಿದರು. ಇದೆಲ್ಲದರ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ‘ಕಂದಾಯ ಸಚಿವ ಆರ್.ಅಶೋಕ ಅವರ ಆಪ್ತ ಸಹಾಯಕ ಎಂದು ಗಂಗಾಧರ್ ಎಂಬಾತ ಪರಿಚಯಿಸಿಕೊಂಡು ಹಣ ಕೀಳಲು ಯತ್ನಿಸಿದರು’ ಎಂದು ಶೃಂಗೇರಿ ತಾಲ್ಲೂಕು ಉಪ ನೋಂದಣಾಧಿಕಾರಿ ಎಚ್.ಎಸ್. ಚೆಲುವರಾಜು ಆರೋಪಿಸಿದ್ದಾರೆ.</p>.<p>‘ಸಚಿವ ಅಶೋಕ ಅವರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕಾರ್ಯಕ್ರಮ ಪಟ್ಟಿ ಇದೇ 20ರಂದು ವಾಟ್ಸ್ಆ್ಯಪ್ಗೆ ಅಪರಿಚಿತ ಫೋನ್ ನಂಬರ್ನಿಂದ ಬಂದಿತ್ತು. 24ರಂದು ಬೆಳಿಗ್ಗೆ 10.30ರ ಹೊತ್ತಿಗೆ ವ್ಯಕ್ತಿಯೊಬ್ಬರು ಫೋನ್ ಮಾಡಿದರು. ಕಂದಾಯ ಸಚಿವ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಮಾತ<br />ನಾಡುತ್ತಿದ್ದೇನೆ. ಸಚಿವರು ಶೃಂಗೇರಿಗೆ ಸಂಜೆ ಬರುತ್ತಾರೆ. ಅಲ್ಲಿ ಬಂದು ನನ್ನನ್ನು ಭೇಟಿ ಮಾಡುವಂತೆ ಅವರು ಸೂಚಿಸಿದರು’ ಎಂದು ಚೆಲುವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಸಚಿವರು ಬಂದಿದ್ದ ಸ್ಥಳಕ್ಕೆ ಹೋಗಿ ಆ ವ್ಯಕ್ತಿಯನ್ನು ಭೇಟಿಯಾದೆ. ಅವರು ಕೊಠಡಿಗೆ ಕರೆದೊಯ್ದರು. ‘ಕೊಡಿ... ಏನು ತಂದಿದ್ದೀರಾ...? ಎಷ್ಟು ತಂದಿದ್ದೀರಾ…?’ ಎಂದು ಕೇಳಿದರು. ಅಂಥ ಅಭ್ಯಾಸ ಎಲ್ಲ ಇಟ್ಟುಕೊಂಡಿಲ್ಲ ಎಂದು ದಬಾಯಿಸಿ ಹೊರಬಂದೆ’ ಎಂದರು.</p>.<p>‘ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಇದೆ. ಮಾರನೇ ದಿನ ಆ ವ್ಯಕ್ತಿ ವಾಟ್ಸ್ಆಪ್ ಕಾಲ್ ಮಾಡಿ, ಹಿಂದಿನ ದಿನ ಏನೂ ನಡೆದೇ ಇಲ್ಲ ಎಂಬಂತೆ ಮಾತನಾಡಿದರು. ಇದೆಲ್ಲದರ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>