<p><strong>ಬೆಂಗಳೂರು: </strong>'ನಾಡಿದ ರೈತರು ಯಾವುದೇ ಆತಂಕಕ್ಕೆಒಳಗಾಗುವ ಅಗತ್ಯ ಇಲ್ಲ. ರೈತರ ಬಿಲ್ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದರು.</p>.<p>ರೈತರು ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿ ವಿಚಾರ ಕುರಿತು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಬೆಳಿಗ್ಗೆ ಮಾತನಾಡಿದ ಅವರು, 'ರೈತರ ಹಣ ಬಾಕಿ ಪಾವತಿ ಬಗ್ಗೆ ಬೆಳಗಾವಿಯಲ್ಲಿ ಹಾಗೂ ಬೆಂಗಳೂರಿನಲ್ಲಿಸಭೆ ನಡೆಸಿದ್ದೇನೆ' ಎಂದರು.</p>.<p>'ಮಾಲೀಕರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೆ. ರೈತರಿಗೆ ಬಾಕಿ ಇರುವ ಹಣ ನೀಡಲು ಸೂಚನೆ ನೀಡಲಾಗಿತ್ತು. ಈ ವರ್ಷ 42.17 ಕೋಟಿ ಮೊತ್ತ ಬಾಕಿ ಇತ್ತು . ಕಾರ್ಖಾನೆಗಳು ಮೂರು ದಿನಗಳ ಒಳಗಾಗಿ 26.26 ಕೋಟಿ ಜಮೆ ಮಾಡಲಾಗಿದೆ ಇನ್ನು ಪಾವತಿ ಆಗದ 15.91 ಕೋಟಿ ಬಾಕಿ ಇದೆ' ಎಂದರು.</p>.<p>'ಬಸವೇಶ್ವರ ಶುಗರ್ಸ್ 9.50 ಕೋಟಿ, ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಯಿಂದ 6.41 ಬಾಕಿ ಇದೆ. ಈ ಕಾರ್ಖಾನೆಗಳಿಗೆ ವಸೂಲಾತಿಗೆ ನೋಟಿಸ್ ನೀಡಲಾಗಿದೆ ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>'ನಾಡಿದ ರೈತರು ಯಾವುದೇ ಆತಂಕಕ್ಕೆಒಳಗಾಗುವ ಅಗತ್ಯ ಇಲ್ಲ. ರೈತರ ಬಿಲ್ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ' ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಹೇಳಿದರು.</p>.<p>ರೈತರು ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿ ವಿಚಾರ ಕುರಿತು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಬೆಳಿಗ್ಗೆ ಮಾತನಾಡಿದ ಅವರು, 'ರೈತರ ಹಣ ಬಾಕಿ ಪಾವತಿ ಬಗ್ಗೆ ಬೆಳಗಾವಿಯಲ್ಲಿ ಹಾಗೂ ಬೆಂಗಳೂರಿನಲ್ಲಿಸಭೆ ನಡೆಸಿದ್ದೇನೆ' ಎಂದರು.</p>.<p>'ಮಾಲೀಕರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೆ. ರೈತರಿಗೆ ಬಾಕಿ ಇರುವ ಹಣ ನೀಡಲು ಸೂಚನೆ ನೀಡಲಾಗಿತ್ತು. ಈ ವರ್ಷ 42.17 ಕೋಟಿ ಮೊತ್ತ ಬಾಕಿ ಇತ್ತು . ಕಾರ್ಖಾನೆಗಳು ಮೂರು ದಿನಗಳ ಒಳಗಾಗಿ 26.26 ಕೋಟಿ ಜಮೆ ಮಾಡಲಾಗಿದೆ ಇನ್ನು ಪಾವತಿ ಆಗದ 15.91 ಕೋಟಿ ಬಾಕಿ ಇದೆ' ಎಂದರು.</p>.<p>'ಬಸವೇಶ್ವರ ಶುಗರ್ಸ್ 9.50 ಕೋಟಿ, ಕೋರ್ ಗ್ರೀನ್ ಶುಗರ್ಸ್ ಕಾರ್ಖಾನೆಯಿಂದ 6.41 ಬಾಕಿ ಇದೆ. ಈ ಕಾರ್ಖಾನೆಗಳಿಗೆ ವಸೂಲಾತಿಗೆ ನೋಟಿಸ್ ನೀಡಲಾಗಿದೆ ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>