‘ಶಾಸಕರಾದ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ ಹಾಗೂ ಎ.ಟಿ.ರಾಮಸ್ವಾಮಿ ಅವರೊಂದಿಗೆ ಹಾಸನದಲ್ಲಿ ಚರ್ಚಿಸುವಾಗ ರೇವಣ್ಣ ಅವರು ಇವರನ್ನೆಲ್ಲಾ ಜೈಲಿಗೆ ಹಾಕಬೇಕೆಂದು ಎಚ್.ಡಿ.ರೇವಣ್ಣ ಸ್ಪಷ್ಟವಾಗಿ ಹೇಳಿದ್ದರು. ಆಗ ನಾನು ಕೆಲವು ರಾಕ್ಷಿಸಿ ಪ್ರವೃತ್ತಿ ಪಿಡಿಒಗಳಿದ್ದಾರೆ. ಅವರು ಹೇಳಿದ್ದನ್ನೆಲ್ಲಾ ಕೇಳಬೇಡಿ ಎಂದು ತಾಲ್ಲೂಕು ಪಂಚಾಯಿತಿ ಇಒಗಳಿಗೆ ಸೂಚಿಸಿದ್ದೆ. ಕೆಲವು ರಾಕ್ಷಿಸಿ ಪ್ರವೃತ್ತಿ ಪಿಡಿಒಗಳು ಬಡವರನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಇವರಿಂದ ಅರ್ಹರಿಗೆ ಮನೆ ಸಿಗುವುದು ಕಷ್ಟವಾಗಿದೆ. ಅಂಥ ಪಿಡಿಒಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ್ದೆ’ ಎಂದು ಸೋಮಣ್ಣ ಸ್ಪಷ್ಟನೆ ನೀಡಿದರು.