‘ಆರು ವರ್ಷಗಳ ಹಿಂದೆ ನನ್ನ ಸಹೋದರ, ತಂದೆ ಮೃತಪಟ್ಟರು. ಈ ನೋವಿನಲ್ಲಿ ಜೀವನ ಸಾಗಿಸುತ್ತಿದ್ದ ನನ್ನ ತಾಯಿಗೆ ಅನಾರೋಗ್ಯ ಉಂಟಾಯಿತು. ಕ್ರಿಶ್ಚಿಯನ್ ಧರ್ಮಾಚರಣೆ ಮಾಡಿದರೆ ನೋವು ನಿವಾರಣೆಯಾಗುತ್ತದೆ ಎಂದು ಹಲವರು ನಂಬಿಸಿದ್ದರು. ಇದನ್ನು ಒಪ್ಪಿದ ನನ್ನ ತಾಯಿ ನಮ್ಮ ಆಚರಣೆ, ಸಂಸ್ಕೃತಿ ಬಿಟ್ಟರು. ಊರಲ್ಲಿದ್ದ ಸ್ವಂತ ಮನೆ ತೊರೆದು ಪಟ್ಟಣಕ್ಕೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿ ಚರ್ಚ್ನ ಆಚರಣೆಯಲ್ಲಿ ಭಾಗವಹಿಸುತ್ತಿದ್ದರು’ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.