ಬೆಂಗಳೂರು: ‘ವಿನಾಕಾರಣ ನನ್ನನ್ನು ತಡೆದಿದ್ದ ಸಂಚಾರ ಪೊಲೀಸರು, ಮಾಸ್ಕ್ ಹಾಕಿದ್ದರೂ ₹ 250 ದಂಡ ವಿಧಿಸಿದ್ದಾರೆ’ ಎಂದು ಆರೋಪಿಸಿ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.