‘ಪರೀಕ್ಷೆಗೂ ಮೊದಲು ನನಗೆ ಕರೆ ಮಾಡಿದ್ದ ಶಾಸಕರ ಪುತ್ರ ಅರುಣಕುಮಾರ್ ತಂದೆಯವರ ಗನ್ಮ್ಯಾನ್ ಹಯ್ಯಾಳಿ ದೇಸಾಯಿ ಪಿಎಸ್ಐ ಪರೀಕ್ಷೆ ಬರೆದಿದ್ದು, ಆತನನ್ನು ಪಾಸ್ ಮಾಡಿಸಬೇಕು ಎಂದು ಹೇಳಿದರು. ಅದಕ್ಕೆ ನಾನು ಮಂಜುನಾಥ ಮೇಳಕುಂದಿ ಮೊಬೈಲ್ ನಂಬರ್ ಕೊಟ್ಟಿದ್ದೆ. ನಂತರ ನನಗೆ ಕರೆ ಮಾಡಿದ ಮೇಳಕುಂದಿ, ಹಯ್ಯಾಳಿ ಪಾಸ್ ಮಾಡಿಸಲು ಹಣ ಯಾರು ಕೊಡುತ್ತಾರೆ ಎಂದು ಅರುಣಕುಮಾರಗೆ ಕೇಳಿದೆ. ಹಣವನ್ನು ನನ್ನ ಚಿಕ್ಕಪ್ಪ ಎಸ್.ವೈ. ಪಾಟೀಲ ಕೊಡುತ್ತಾರೆ ಎಂದು ಹೇಳಿದ್ದಾಗಿ ತಿಳಿಸಿದರು. ನಂತರ ₹40 ಲಕ್ಷ ಕೊಡುವಂತೆ ಹೇಳು ಎಂದು ಮಂಜುನಾಥ ಹೇಳಿದ್ದ. ಅಂತಿಮವಾಗಿ ₹ 30 ಲಕ್ಷಕ್ಕೆ ಡೀಲ್ ಮುಗಿಯಿತು. ಮುಂಗಡ ಹಣವಾಗಿ ₹10 ಲಕ್ಷವನ್ನು ಕೊಡಲು ಒಪ್ಪಿದರು. ಒಂದು ಬಾರಿ ನಾನು ಹೋಗಿ ₹5 ಲಕ್ಷ, ಮತ್ತೊಂದು ಬಾರಿ ₹5 ಲಕ್ಷವನ್ನುನನ್ನ ಅಣ್ಣ ಮಹಾಂತೇಶ ಪಾಟೀಲ ಪಡೆದಿದ್ದೇವೆ’ ಎಂದು ತಿಳಿಸಿದ್ದಾಗಿ ದೋಷಾರೋಪಪಟ್ಟಿಯಲ್ಲಿ ವಿವರಿಸಲಾಗಿದೆ.