<p><strong>ಬೆಂಗಳೂರು:</strong> ಮಂಗಳಮುಖಿಯರನ್ನು ನೋಡುವ ದೃಷ್ಟಿಕೋನವೇ ಬೇರೆ ಇದ್ದು, ಕೆಲವರು ಅದನ್ನು ಬದಲಿಸುವ ಕೆಲಸ ಮಾಡುತ್ತಿದ್ದಾರೆ. ‘ನಮ್ಮನೆ ಸುಮ್ಮನೆ’ ಎಂಬ ಸಂಘಟನೆ ರಚಿಸಿಕೊಂಡಿರುವ ಈ ಸಮುದಾಯದವರು ಅನಾಥರು, ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಆಶ್ರಯ ನೀಡಲು ಮುಂದಾಗಿದ್ದಾರೆ.</p>.<p>‘ಐವರು ಸೇರಿ ಸಂಘಟನೆ ರಚಿಸಿಕೊಂಡಿದ್ದೇವೆ. ಈಗಾಗಲೇ 25 ಜನರನ್ನು ಗುರುತಿಸಿದ್ದು, ಅವರಿಗೆ ಆಶ್ರಯ ಒದಗಿಸಿದ್ದೇವೆ. ‘ನಮ್ಮನೆ–ಸುಮ್ಮನೆ’ ಅನಾಥಾಶ್ರಮ ಇದೇ 23ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ’ ಎಂದು ಸಂಘಟನೆಯ ಸದಸ್ಯೆ ನಕ್ಷತ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಂಗಳಮುಖಿಯರಾದ ಮಿಲನ, ಸೌಂದರ್ಯ, ರೇಷ್ಮಾ, ನಕ್ಷತ್ರ, ತನುಶ್ರೀ ಸೇರಿ ನಗರದ ಗಂಗೊಂಡನಹಳ್ಳಿ ವೃತ್ತದ ಸಮೀಪ ಕಟ್ಟಡ ಬಾಡಿಗೆ ಪಡೆದು ಅನಾಥಾಶ್ರಮ ಸ್ಥಾಪಿಸುತ್ತಿದ್ದಾರೆ. ಈಗಾಗಲೇ ಬ್ಯೂಟಿಪಾರ್ಲರ್ ತೆರೆದು ಉಳಿದವರಿಗೆ ಮಾದರಿಯಾಗಿದ್ದ ಮಂಗಳಮುಖಿಯರು ಈಗ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಇದು ರಾಜ್ಯದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಅನಾಥಾಶ್ರಮ.</p>.<p>‘ಮಂಗಳಮುಖಿಯರೆಂದರೆ ರಸ್ತೆ ಬದಿಯಲ್ಲಿ, ಸರ್ಕಲ್ಗಳಲ್ಲಿ ಭಿಕ್ಷೆ ಬೇಡುವವರು ಎಂದೇ ಜನ ನೋಡುತ್ತಾರೆ. ಇದನ್ನು ಬದಲಿಸುವುದರ ಜೊತೆಗೆ, ನಿರ್ಗತಿಕರಿಗೆ ನಮ್ಮಿಂದ ಸ್ವಲ್ಪ ಸಹಾಯ ಮಾಡುವ ಉದ್ದೇಶದಿಂದ ಈ ಅನಾಥಾಶ್ರಮ ಮಾಡುತ್ತಿದ್ದೇವೆ. ಊಟ, ವೈದ್ಯಕೀಯ ಸೌಲಭ್ಯ, ಆಪ್ತ ಸಮಾಲೋಚನೆ, ಮಾರ್ಗದರ್ಶನ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಒಟ್ಟು 40 ಜನಕ್ಕೆ ಸ್ಥಳಾವಕಾಶ ಕಲ್ಪಿಸಬಹುದಾಗಿದೆ. ಮೊದಲು ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ’ ಎಂದು ನಕ್ಷತ್ರ ಹೇಳಿದರು.</p>.<p>‘ನಗರದಲ್ಲಿ ಓಡಾಡುವಾಗ ಯಾರಾದರೂ ಅನಾಥರು, ನಿರ್ಗತಿಕರು ಕಂಡರೆ ಅವರನ್ನು ರಕ್ಷಿಸಿ ಅನಾಥಾಶ್ರಮಗಳಿಗೆ ಬಿಡುತ್ತಿದ್ದೆವು. ಈಗ ನಾವೇ ಆಶ್ರಮ ಒಂದನ್ನು ಸ್ಥಾಪಿಸುತ್ತಿರುವುದು ಸಂತಸ ಎನಿಸುತ್ತದೆ’ ಎನ್ನುವ ಅವರು, ಈ ಉತ್ತಮ ಕಾರ್ಯಕ್ಕೆ ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಕೃತಜ್ಞತೆ ಹೇಳುವುದನ್ನು ಮರೆಯುವುದಿಲ್ಲ.</p>.<p>ಆರ್ಥಿಕ ನೆರವು ನೀಡಲು ಬಯಸುವವರು, ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ– 9682500100555001, ಐಎಫ್ಎಸ್ಸಿ ಕೋಡ್– ಕೆಎಆರ್ಬಿ0000968, ಎಚ್ಎಂಟಿ ಶಾಖೆ, ಬೆಂಗಳೂರು ಈ ಖಾತೆಗೆ ಹಣ ಜಮಾ ಮಾಡಬಹುದು. ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ದವಸ–ಧಾನ್ಯ, ಔಷಧವನ್ನೂ ಪೂರೈಸಬಹುದು ಎಂದು ಅವರು ಕೋರಿದರು.</p>.<p><strong>ಸಂಪರ್ಕಕ್ಕೆ:</strong> 95352 36199, 80500 35748, 84316 68589.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಂಗಳಮುಖಿಯರನ್ನು ನೋಡುವ ದೃಷ್ಟಿಕೋನವೇ ಬೇರೆ ಇದ್ದು, ಕೆಲವರು ಅದನ್ನು ಬದಲಿಸುವ ಕೆಲಸ ಮಾಡುತ್ತಿದ್ದಾರೆ. ‘ನಮ್ಮನೆ ಸುಮ್ಮನೆ’ ಎಂಬ ಸಂಘಟನೆ ರಚಿಸಿಕೊಂಡಿರುವ ಈ ಸಮುದಾಯದವರು ಅನಾಥರು, ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಆಶ್ರಯ ನೀಡಲು ಮುಂದಾಗಿದ್ದಾರೆ.</p>.<p>‘ಐವರು ಸೇರಿ ಸಂಘಟನೆ ರಚಿಸಿಕೊಂಡಿದ್ದೇವೆ. ಈಗಾಗಲೇ 25 ಜನರನ್ನು ಗುರುತಿಸಿದ್ದು, ಅವರಿಗೆ ಆಶ್ರಯ ಒದಗಿಸಿದ್ದೇವೆ. ‘ನಮ್ಮನೆ–ಸುಮ್ಮನೆ’ ಅನಾಥಾಶ್ರಮ ಇದೇ 23ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ’ ಎಂದು ಸಂಘಟನೆಯ ಸದಸ್ಯೆ ನಕ್ಷತ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಮಂಗಳಮುಖಿಯರಾದ ಮಿಲನ, ಸೌಂದರ್ಯ, ರೇಷ್ಮಾ, ನಕ್ಷತ್ರ, ತನುಶ್ರೀ ಸೇರಿ ನಗರದ ಗಂಗೊಂಡನಹಳ್ಳಿ ವೃತ್ತದ ಸಮೀಪ ಕಟ್ಟಡ ಬಾಡಿಗೆ ಪಡೆದು ಅನಾಥಾಶ್ರಮ ಸ್ಥಾಪಿಸುತ್ತಿದ್ದಾರೆ. ಈಗಾಗಲೇ ಬ್ಯೂಟಿಪಾರ್ಲರ್ ತೆರೆದು ಉಳಿದವರಿಗೆ ಮಾದರಿಯಾಗಿದ್ದ ಮಂಗಳಮುಖಿಯರು ಈಗ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಇದು ರಾಜ್ಯದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಅನಾಥಾಶ್ರಮ.</p>.<p>‘ಮಂಗಳಮುಖಿಯರೆಂದರೆ ರಸ್ತೆ ಬದಿಯಲ್ಲಿ, ಸರ್ಕಲ್ಗಳಲ್ಲಿ ಭಿಕ್ಷೆ ಬೇಡುವವರು ಎಂದೇ ಜನ ನೋಡುತ್ತಾರೆ. ಇದನ್ನು ಬದಲಿಸುವುದರ ಜೊತೆಗೆ, ನಿರ್ಗತಿಕರಿಗೆ ನಮ್ಮಿಂದ ಸ್ವಲ್ಪ ಸಹಾಯ ಮಾಡುವ ಉದ್ದೇಶದಿಂದ ಈ ಅನಾಥಾಶ್ರಮ ಮಾಡುತ್ತಿದ್ದೇವೆ. ಊಟ, ವೈದ್ಯಕೀಯ ಸೌಲಭ್ಯ, ಆಪ್ತ ಸಮಾಲೋಚನೆ, ಮಾರ್ಗದರ್ಶನ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಒಟ್ಟು 40 ಜನಕ್ಕೆ ಸ್ಥಳಾವಕಾಶ ಕಲ್ಪಿಸಬಹುದಾಗಿದೆ. ಮೊದಲು ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ’ ಎಂದು ನಕ್ಷತ್ರ ಹೇಳಿದರು.</p>.<p>‘ನಗರದಲ್ಲಿ ಓಡಾಡುವಾಗ ಯಾರಾದರೂ ಅನಾಥರು, ನಿರ್ಗತಿಕರು ಕಂಡರೆ ಅವರನ್ನು ರಕ್ಷಿಸಿ ಅನಾಥಾಶ್ರಮಗಳಿಗೆ ಬಿಡುತ್ತಿದ್ದೆವು. ಈಗ ನಾವೇ ಆಶ್ರಮ ಒಂದನ್ನು ಸ್ಥಾಪಿಸುತ್ತಿರುವುದು ಸಂತಸ ಎನಿಸುತ್ತದೆ’ ಎನ್ನುವ ಅವರು, ಈ ಉತ್ತಮ ಕಾರ್ಯಕ್ಕೆ ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಕೃತಜ್ಞತೆ ಹೇಳುವುದನ್ನು ಮರೆಯುವುದಿಲ್ಲ.</p>.<p>ಆರ್ಥಿಕ ನೆರವು ನೀಡಲು ಬಯಸುವವರು, ಕರ್ನಾಟಕ ಬ್ಯಾಂಕ್ ಖಾತೆ ಸಂಖ್ಯೆ– 9682500100555001, ಐಎಫ್ಎಸ್ಸಿ ಕೋಡ್– ಕೆಎಆರ್ಬಿ0000968, ಎಚ್ಎಂಟಿ ಶಾಖೆ, ಬೆಂಗಳೂರು ಈ ಖಾತೆಗೆ ಹಣ ಜಮಾ ಮಾಡಬಹುದು. ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ದವಸ–ಧಾನ್ಯ, ಔಷಧವನ್ನೂ ಪೂರೈಸಬಹುದು ಎಂದು ಅವರು ಕೋರಿದರು.</p>.<p><strong>ಸಂಪರ್ಕಕ್ಕೆ:</strong> 95352 36199, 80500 35748, 84316 68589.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>