’ಮೂರು ದಿನಗಳಿಂದ ಮನೆಗೆ ಸತತವಾಗಿ ಮುಖಂಡರು ಅಭಿಮಾನಿಗಳು ಭೇಟಿ ನೀಡುತ್ತಿರುವುದರಿಂದ ಪ್ರವೀಣ್ ಕುಟುಂಬದವರಿಗೆ ವಿಶ್ರಾಂತಿಗೆಸಮಯವೇ ಇಲ್ಲದ ಸ್ಥಿತಿ ಎದುರಾಗಿದೆ. ಪ್ರವೀಣ್ ಅವರ ಹತ್ತಿರದ ಬಂಧುಗಳು ವಿಶ್ರಾಂತಿಯಲ್ಲಿರುವುದರಿಂದ ಭೇಟಿಯಾಗಲು ನಿರಾಕರಿಸಿದ್ದಾರೆ. ಪ್ರವೀಣ್ ಅವರ ಚಿಕ್ಕಪ್ಪನ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ನೆಟ್ಟಾರುವರೆಗೆ ಬಂದಿದ್ದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಪ್ರವೀಣ್ ಕುಟುಂಬದವರಿಗೆ ಮತ್ತಷ್ಟು ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾನು ನೆಟ್ಟಾರು ವೃತ್ತದ ಬಳಿಯಿಂದಲೇ ನಿರ್ಗಮಿಸಿದೆ’ ಎಂದು ಯು.ಟಿ.ಖಾದರ್ ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.