‘ಈ ಯೋಜನೆಯಿಂದ ಇಬ್ಬರಿಗೂ (ಕರ್ನಾಟಕ– ತಮಿಳುನಾಡು) ಅನುಕೂಲವಾಗುತ್ತದೆ. ಹೀಗಾಗಿ ಸೌಹಾರ್ದಯುತವಾಗಿ ಮಾಡೋಣ ಎಂದು ನಾನು ತಮಿಳುನಾಡು ಮುಖ್ಯಮಂತ್ರಿ ಬಳಿ ವಿನಂತಿ ಮಾಡಿದ್ದೆ. ಆದರೆ, ಅವರು ಯಾಕೋ ಸರಿಯಾಗಿ ಸ್ಪಂದಿಸಲಿಲ್ಲ. ಆದರೂ ನಾವು ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತೇವೆ. ಆ ವಿಷಯದಲ್ಲಿ ರಾಜ್ಯದ ಜನತೆಗೆ ಯಾವುದೇ ಅನುಮಾನ ಬೇಡ’ ಎಂದು ಯಡಿಯೂರಪ್ಪ ಹೇಳಿದರು.