ಅಕಾಲಿಕ ಮಳೆಯಿಂದ ಅಲೆಮಾರಿ ಜನರ ಟೆಂಟ್ಗಳಿಗೆ ಹಾನಿಯಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಜೀವನ ಕಳೆಯುವುದು ಕಷ್ಟವಾಗಿದೆ. ಅವರಿಗೆ ಕಾಯಂ ವಸತಿ ವ್ಯವಸ್ಥೆ ಒದಗಿಸುವವರೆಗೂ ಟೆಂಟ್ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಬೇಕು. ಬೇಳೆ, ಕಾಳುಗಳು, ಎಣ್ಣೆ, ಮೆಣಸಿನಪುಡಿ, ಉಪ್ಪು ಸೇರಿದಂತೆ ಎಲ್ಲ ಪಡಿತರ ವಸ್ತುಗಳು ಮತ್ತು ಆಹಾರ ಧಾನ್ಯಗಳುಳ್ಳ ಕಿಟ್ ವಿತರಿಸಬೇಕು. ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ಮಾಸ್ಕ್, ಸ್ಯಾನಿಟೈಸರ್, ಸೋಪ್ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.