<p><strong>ಕಲಬುರ್ಗಿ: </strong>ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದ ಕಲ್ಲಮ್ಮ ಎಂಬ ಈ ಅಜ್ಜಿ ಶುಕ್ರವಾರ ತಮ್ಮ ಮುರುಕಲು ಮನೆಯ ಚಾವಣಿ ಮೇಲೆ ಕುಳಿತು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ಅತಿವೃಷ್ಟಿ ಹಾಗೂ ಭೀಮಾ ಪ್ರವಾಹದಿಂದಾಗಿ ತಮ್ಮ ಮನೆ ಹಾಳಾಗಿದ್ದು, ಹೊಸ ಮನೆ ಕಟ್ಟಿಸಿಕೊಡಬೇಕು ಎಂಬುದು ಅವರ ಬೇಡಿಕೆ.</p>.<p>ಕಂದಾಯ ಸಚಿವ ಆರ್.ಅಶೋಕ ಅವರು ಶುಕ್ರವಾರ ಪ್ರವಾಹ ನಷ್ಟದ ಸಮೀಕ್ಷೆಗೆ ಫಿರೋಜಾಬಾದ್ ಗ್ರಾಮಕ್ಕೆ ಬಂದಾಗಲೂ ಈ ಅಜ್ಜಿ ಮನೆ ಮೇಲೆಯೇ ಕುಳಿತಿದ್ದರು. ಆದರೆ, ಅವರನ್ನು ಗಮನಿಸದ ಸಚಿವರು ವಾಹನದಲ್ಲಿ ಮುಂದೆ ಸಾಗಿದರು.</p>.<p>’ಪ್ರತಿ ವರ್ಷವೂ ಪ್ರವಾಹದಿಂದ ನಾವು ಬೇಸತ್ತುಹೋಗಿದ್ದೇವೆ. ಈ ಬಾರಿ ನನ್ನ ಮನೆ ಸಂಪೂರ್ಣ ಕುಸಿದಿದೆ. ವಾಸಕ್ಕೆ ಸುರಕ್ಷಿತ ಜಾಗವಿಲ್ಲ. ಹೊಸ ಮನೆ ಕಟ್ಟಿಸಿ ಕೊಡುವವರೆಗೂ ಚಾವಣಿ ಬಿಟ್ಟು ಇಳಿಯುವುದಿಲ್ಲ‘ ಎಂದು ಅಜ್ಜಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.</p>.<p>ಕಳೆದ ಮೂರು ದಿನಗಳಿಂದಲೂ ಅಜ್ಜಿ ಹಗಲಿಡೀ ಮನೆ ಮೇಲೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಸಚಿವರು ಸೌಜನ್ಯಕ್ಕೂ ಅವರನ್ನು ಮಾತನಾಡಿಸದೇ ಹೋದದ್ದು ಖಂಡನಾರ್ಹ ಎಂದು ಗ್ರಾಮಸ್ಥರು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದ ಕಲ್ಲಮ್ಮ ಎಂಬ ಈ ಅಜ್ಜಿ ಶುಕ್ರವಾರ ತಮ್ಮ ಮುರುಕಲು ಮನೆಯ ಚಾವಣಿ ಮೇಲೆ ಕುಳಿತು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ಅತಿವೃಷ್ಟಿ ಹಾಗೂ ಭೀಮಾ ಪ್ರವಾಹದಿಂದಾಗಿ ತಮ್ಮ ಮನೆ ಹಾಳಾಗಿದ್ದು, ಹೊಸ ಮನೆ ಕಟ್ಟಿಸಿಕೊಡಬೇಕು ಎಂಬುದು ಅವರ ಬೇಡಿಕೆ.</p>.<p>ಕಂದಾಯ ಸಚಿವ ಆರ್.ಅಶೋಕ ಅವರು ಶುಕ್ರವಾರ ಪ್ರವಾಹ ನಷ್ಟದ ಸಮೀಕ್ಷೆಗೆ ಫಿರೋಜಾಬಾದ್ ಗ್ರಾಮಕ್ಕೆ ಬಂದಾಗಲೂ ಈ ಅಜ್ಜಿ ಮನೆ ಮೇಲೆಯೇ ಕುಳಿತಿದ್ದರು. ಆದರೆ, ಅವರನ್ನು ಗಮನಿಸದ ಸಚಿವರು ವಾಹನದಲ್ಲಿ ಮುಂದೆ ಸಾಗಿದರು.</p>.<p>’ಪ್ರತಿ ವರ್ಷವೂ ಪ್ರವಾಹದಿಂದ ನಾವು ಬೇಸತ್ತುಹೋಗಿದ್ದೇವೆ. ಈ ಬಾರಿ ನನ್ನ ಮನೆ ಸಂಪೂರ್ಣ ಕುಸಿದಿದೆ. ವಾಸಕ್ಕೆ ಸುರಕ್ಷಿತ ಜಾಗವಿಲ್ಲ. ಹೊಸ ಮನೆ ಕಟ್ಟಿಸಿ ಕೊಡುವವರೆಗೂ ಚಾವಣಿ ಬಿಟ್ಟು ಇಳಿಯುವುದಿಲ್ಲ‘ ಎಂದು ಅಜ್ಜಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.</p>.<p>ಕಳೆದ ಮೂರು ದಿನಗಳಿಂದಲೂ ಅಜ್ಜಿ ಹಗಲಿಡೀ ಮನೆ ಮೇಲೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಸಚಿವರು ಸೌಜನ್ಯಕ್ಕೂ ಅವರನ್ನು ಮಾತನಾಡಿಸದೇ ಹೋದದ್ದು ಖಂಡನಾರ್ಹ ಎಂದು ಗ್ರಾಮಸ್ಥರು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>