ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಜನಾಗ್ರಹ ಆಂದೋಲನದ ಮಾವಳ್ಳಿ ಶಂಕರ್, ಕೆ.ಎಲ್. ಅಶೋಕ್, ಸಸಿಕಾಂತ್ ಸೆಂಥಿಲ್, ಸ್ವರ್ಣಾ ಭಟ್, ಚಾಮರಸ ಮಾಲಿಪಾಟೀಲ್, ಯೂಸೂಫ್ ಕನ್ನಿ, ಎಚ್.ಆರ್. ಬಸವರಾಜಪ್ಪ, ಯಾಸೀನ್ ಮಲ್ಪೆ ಮತ್ತು ನೂರ್ ಶ್ರೀಧರ್, ‘ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಯಾವ ಕಾರ್ಯಕ್ರಮವನ್ನೂ ಮುಖ್ಯಮಂತ್ರಿ ಪ್ರಕಟಿಸಿಲ್ಲ. ಇದು ನೆರವಿನ ಪ್ಯಾಕೇಜ್ ಎಂದು ಕರೆಯುವುದಕ್ಕೂ ಅನರ್ಹವಾಗಿದೆ’ ಎಂದು ಹೇಳಿದ್ದಾರೆ.