ಚೆನ್ನೈನಿಂದ ತಜ್ಞರ ತಂಡ: 1,200 ವರ್ಷಗಳಷ್ಟು ಹಳೆಯದಾದ ವಿಜಯಸ್ತಂಭದ ಶಿಲೆ ನಿರಂತರವಾಗಿ ಮಳೆ–ಗಾಳಿ, ಬಿಸಿಲಿಗೆ ಸಿಲುಕಿ ಸಾಮರ್ಥ್ಯ ಕಳೆದುಕೊಂಡು ಅಪಾಯದಂಚಿನಲ್ಲಿದೆ. ಅದರ ಸಂರಕ್ಷಣೆಗೆ ಮೊದಲು ರಾಸಾಯನಿಕ ಉಪಚಾರ (ಕೆಮಿಕಲ್ ಟ್ರೀಟ್ಮೆಂಟ್) ಮಾಡಲಾಗುವುದು. ನಂತರ ಹಿತ್ತಾಳೆಯ ರಿಂಗ್ ಹಾಕಿ ಭದ್ರಪಡಿಸಲಾಗುತ್ತಿದೆ. ಈ ಕಾರ್ಯಕ್ಕೆ ಚೆನ್ನೈನಿಂದ ತಜ್ಞರ ತಂಡ ಬರಲಿದೆ.