‘ಮುಂದಿನ ಹಂತದಲ್ಲಿ ಅದಕ್ಕೆ ಕೆಮಿಕಲ್ ಟ್ರೀಟ್ಮೆಂಟ್ ಮಾಡಲಾಗುವುದು.ಈ ಕಂಬದ ಅವಧಿಯಲ್ಲಿಯೇ ರೂಪುಗೊಂಡಿರುವ ಕಲ್ಲನ್ನು ಹುಡುಕಿ, ಪುಡಿ ಮಾಡಿ, ಸ್ತಂಭದಲ್ಲಿರುವ ಬಿರುಕುಗಳನ್ನು ಮುಚ್ಚಲು ಬಳಸಲಾಗುವುದು. ಹಿತ್ತಾಳೆ ಉಂಗುರದ ಗುರುತು, ಸ್ತಂಭದ ಮೇಲೆ ಮೂಡದಂತೆ ನೋಡಕೊಳ್ಳಬೇಕಿದೆ. ಇದಕ್ಕೆ ತಾಂತ್ರಿಕ ನೆರವು ನೀಡುವಂತೆ ಹುಬ್ಬಳ್ಳಿಯ ಕೆಎಲ್ಇ ಪಾಲಿಟೆಕ್ನಿಕ್ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ’ ಎಂದು ಬಡಿಗೇರ ಹೇಳಿದರು.