<p><strong>ಬೆಂಗಳೂರು: </strong>‘ನಾಡಪ್ರಭು ಕೆಂಪೇಗೌಡರ ನೆಲವಾದ ಮಾಗಡಿಯ ಚಿಕ್ಕಕಲ್ಯ ಗ್ರಾಮದಲ್ಲೇ ನನ್ನ ಕಂದಾಯ ದಾಖಲೆಗಳಿವೆ. ರಾಮನಗರ ಜಿಲ್ಲೆಯ ಜೊತೆ ನನಗೆ ಡಿಕೆ ಸಹೋದರರಿಗಿಂತಲೂ ದೀರ್ಘ ಇತಿಹಾಸವಿದೆ’ ಎಂದುಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಪಾದಿಸಿದರು.</p>.<p>‘ರಾಮನಗರಕ್ಕೂ ನನಗೂ ಏನು ಸಂಬಂಧ’ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ. ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎನ್ನುವ ನನ್ನ ಪೂರ್ಣ ಹೆಸರನ್ನು ನೆನಪಿಸುತ್ತೇನೆ. ಇಂತಹ ಕನಿಷ್ಠ ಪರಿಜ್ಞಾನವೂ ಇಲ್ಲದ ವ್ಯಕ್ತಿ ಕೆಪಿಸಿಸಿ ಅಧ್ಯಕ್ಷರಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಅವರು ಹೇಳಿದರು.</p>.<p><a href="https://www.prajavani.net/video/district/ramanagara/ramanagara-bjp-cn-ashwath-narayan-congress-dk-suresh-clash-898602.html" itemprop="url" target="_blank">Video | ರಾಮನಗರ: ಸಿಎಂ ಎದುರೇ ಅಶ್ವತ್ಥ ನಾರಾಯಣ–ಡಿ.ಕೆ.ಸುರೇಶ್ ಜಟಾಪಟಿ</a></p>.<p>‘ರಾಮನಗರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧ. ಕಾಂಗ್ರೆಸ್ ನಾಯಕರ ಧಮಕಿ, ದಬ್ಬಾಳಿಕೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳೇ ಉತ್ತರ’ ಎಂದರು.</p>.<p>‘ಕಾರ್ಯಕ್ರಮದ ಆರಂಭದಿಂದಲೂ ಡಿ.ಕೆ ಸಹೋದರರ ಹಿಂಬಾಲಕರು ಕೆಣಕಲು ಆರಂಭಿಸಿದ್ದರು. ಬಳಿಕ ಗಲಾಟೆ ಮಾಡಿದರು. ಮುಖ್ಯಮಂತ್ರಿಯವರು ಇದ್ದ ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ವಿವೇಚನೆಯೇ ಇವರಿಗಿಲ್ಲ. ಹೀಗಾಗಿ ಅವರ ಹಿಂಬಾಲಕರು ಸೇರಿ ಗಲಾಟೆ ಮಾಡಿದರು. ಈ ಸಹೋದರರಿಗೆ ಅಭದ್ರತೆ ಕಾಡಿರಬಹುದು. ಅದಕ್ಕೆಂದೇ ಈ ರೀತಿ ಮಾಡಿದ್ದಾರೆ’ ಎಂದರು.</p>.<p>‘ಡಿ.ಕೆ.ಶಿವಕುಮಾರ್ ಅವರಂತ ಭಂಡರಿಗೆ ನೇರವಾಗಿಯೇ ಹೇಳುತ್ತೇನೆ. ನಿಮ್ಮ ಪುಂಡಾಟಿಕೆಯನ್ನು ನಾವು ಸಹಿಸುವುದಿಲ್ಲ. ನಮ್ಮ ಸರ್ಕಾರ ಮಾಡಿದ ಕೆಲಸಗಳನ್ನು ಹೇಳಿಕೊಂಡಿದ್ದೇವೆ. ನಿಮ್ಮನ್ನು ಕೇಳಿ ಮಾತನಾಡುವ ಅಗತ್ಯವಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>‘ನಾಡಪ್ರಭು ಕೆಂಪೇಗೌಡರ ನೆಲವಾದ ಮಾಗಡಿಯ ಚಿಕ್ಕಕಲ್ಯ ಗ್ರಾಮದಲ್ಲೇ ನನ್ನ ಕಂದಾಯ ದಾಖಲೆಗಳಿವೆ. ರಾಮನಗರ ಜಿಲ್ಲೆಯ ಜೊತೆ ನನಗೆ ಡಿಕೆ ಸಹೋದರರಿಗಿಂತಲೂ ದೀರ್ಘ ಇತಿಹಾಸವಿದೆ’ ಎಂದುಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರತಿಪಾದಿಸಿದರು.</p>.<p>‘ರಾಮನಗರಕ್ಕೂ ನನಗೂ ಏನು ಸಂಬಂಧ’ ಡಿ.ಕೆ.ಶಿವಕುಮಾರ್ ಕೇಳಿದ್ದಾರೆ. ಚಿಕ್ಕಕಲ್ಯ ನಾರಾಯಣಪ್ಪ ಅಶ್ವತ್ಥನಾರಾಯಣ ಎನ್ನುವ ನನ್ನ ಪೂರ್ಣ ಹೆಸರನ್ನು ನೆನಪಿಸುತ್ತೇನೆ. ಇಂತಹ ಕನಿಷ್ಠ ಪರಿಜ್ಞಾನವೂ ಇಲ್ಲದ ವ್ಯಕ್ತಿ ಕೆಪಿಸಿಸಿ ಅಧ್ಯಕ್ಷರಾಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಅವರು ಹೇಳಿದರು.</p>.<p><a href="https://www.prajavani.net/video/district/ramanagara/ramanagara-bjp-cn-ashwath-narayan-congress-dk-suresh-clash-898602.html" itemprop="url" target="_blank">Video | ರಾಮನಗರ: ಸಿಎಂ ಎದುರೇ ಅಶ್ವತ್ಥ ನಾರಾಯಣ–ಡಿ.ಕೆ.ಸುರೇಶ್ ಜಟಾಪಟಿ</a></p>.<p>‘ರಾಮನಗರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧ. ಕಾಂಗ್ರೆಸ್ ನಾಯಕರ ಧಮಕಿ, ದಬ್ಬಾಳಿಕೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳೇ ಉತ್ತರ’ ಎಂದರು.</p>.<p>‘ಕಾರ್ಯಕ್ರಮದ ಆರಂಭದಿಂದಲೂ ಡಿ.ಕೆ ಸಹೋದರರ ಹಿಂಬಾಲಕರು ಕೆಣಕಲು ಆರಂಭಿಸಿದ್ದರು. ಬಳಿಕ ಗಲಾಟೆ ಮಾಡಿದರು. ಮುಖ್ಯಮಂತ್ರಿಯವರು ಇದ್ದ ಸಭೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ವಿವೇಚನೆಯೇ ಇವರಿಗಿಲ್ಲ. ಹೀಗಾಗಿ ಅವರ ಹಿಂಬಾಲಕರು ಸೇರಿ ಗಲಾಟೆ ಮಾಡಿದರು. ಈ ಸಹೋದರರಿಗೆ ಅಭದ್ರತೆ ಕಾಡಿರಬಹುದು. ಅದಕ್ಕೆಂದೇ ಈ ರೀತಿ ಮಾಡಿದ್ದಾರೆ’ ಎಂದರು.</p>.<p>‘ಡಿ.ಕೆ.ಶಿವಕುಮಾರ್ ಅವರಂತ ಭಂಡರಿಗೆ ನೇರವಾಗಿಯೇ ಹೇಳುತ್ತೇನೆ. ನಿಮ್ಮ ಪುಂಡಾಟಿಕೆಯನ್ನು ನಾವು ಸಹಿಸುವುದಿಲ್ಲ. ನಮ್ಮ ಸರ್ಕಾರ ಮಾಡಿದ ಕೆಲಸಗಳನ್ನು ಹೇಳಿಕೊಂಡಿದ್ದೇವೆ. ನಿಮ್ಮನ್ನು ಕೇಳಿ ಮಾತನಾಡುವ ಅಗತ್ಯವಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>