ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ‘ರಮೇಶ ಜಾರಕಿಹೊಳಿ ಶಾಸಕರಾಗಿದ್ದು, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲು ಇಲ್ಲೇ ವಿಶೇಷ ನ್ಯಾಯಪೀಠವಿದೆ. ಹೀಗಾಗಿ, ಆ ನ್ಯಾಯಪೀಠದ ಮುಂದೆಯೇ ಈ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸುವುದು ಸೂಕ್ತ. ಆದ್ದರಿಂದ ಈ ಕಡತವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಲು ರಿಜಿಸ್ಟ್ರಾರ್ ಜನರಲ್ ಅವ ರಿಗೆ ಸೂಚಿಸಲಾಗುವುದು’ ಎಂದರು.