<p><strong>ಕೋಲಾರ:</strong> ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 40 ವರ್ಷಗಳಿಂದ (ಒಂಬತ್ತು ಚುನಾವಣೆಗಳಲ್ಲಿ) ಕೆ.ಆರ್. ರಮೇಶ್ ಕುಮಾರ್ ಹಾಗೂ ಜಿ.ಕೆ. ವೆಂಕಟಶಿವಾರೆಡ್ಡಿ ನಡುವೆಯೇ ಪೈಪೋಟಿ ಇದೆ.</p>.<p>ಈ ಅವಧಿಯಲ್ಲಿ ಅವರು ಸ್ಪರ್ಧಿಸಿರುವ ಪಕ್ಷಗಳು ಬದಲಾದರೂ ‘ಸ್ವಾಮಿ’, ‘ರೆಡ್ಡಿ’ ಎಂದೇ ಪ್ರಸಿದ್ಧರಾಗಿರುವ ಇವರಿಬ್ಬರ ನಡುವಿನ ಜಿದ್ದಾಜಿದ್ದಿಗೆ ತಡೆ ಬಿದ್ದಿಲ್ಲ. ಹಿಂಬಾಲಕರು, ಕಾರ್ಯಕರ್ತರ ಮನಸ್ಸು ಬದಲಾಗಿಲ್ಲ. ಒಮ್ಮೆ ವೆಂಕಟಶಿವಾರೆಡ್ಡಿ ಹಿಡಿತ ಸಾಧಿಸಿದರೆ, ಮತ್ತೊಮ್ಮೆ ರಮೇಶ್ ಕುಮಾರ್ ಗೆಲ್ಲುತ್ತಾ ಬಂದಿದ್ದಾರೆ.</p>.<p>ವೆಂಕಟಶಿವಾರೆಡ್ಡಿ ಕಾಂಗ್ರೆಸ್, ಬಿಜೆಪಿ ಸುತ್ತಿ ಜೆಡಿಎಸ್ಗೆ ಬಂದರೆ, ರಮೇಶ್ ಪಕ್ಷೇತರ, ಕಾಂಗ್ರೆಸ್, ಜನತಾ ಪರಿವಾರ ಸುತ್ತಿ ಮತ್ತೆ ಕಾಂಗ್ರೆಸ್ಗೆ ಬಂದಿದ್ದಾರೆ.</p>.<p>1978ರಲ್ಲಿ ವಿಧಾನಸಭೆ ಚುನಾವಣೆಗೆ ಪದಾರ್ಪಣೆ ಮಾಡಿದ್ದ ರಮೇಶ್ ಕುಮಾರ್ ಕಾಂಗ್ರೆಸ್ನಿಂದ ಗೆದ್ದಿದ್ದರು. 1983ರ ವಿಧಾನಸಭೆ ಚುನಾ<br />ವಣೆಯಿಂದ ಇವರಿಬ್ಬರ ಪೈಪೋಟಿ ಆರಂಭವಾಯಿತು. ಆ ಚುನಾವಣೆಯಲ್ಲಿ ವೆಂಕಟಶಿವಾರೆಡ್ಡಿ ಕಾಂಗ್ರೆಸ್ನಿಂದ ಗೆದ್ದಿ<br />ದ್ದರು. ಟಿಕೆಟ್ ಕೈತಪ್ಪಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿದ್ದ ರಮೇಶ್ ಕುಮಾರ್ ಕೇವಲ 642 ಮತಗಳಿಂದ ಸೋತಿದ್ದರು.</p>.<p>1999ರಲ್ಲೂ ಅವರು ಸ್ವತಂತ್ರ ಅಭ್ಯರ್ಥಿಯಾಗಿ ವೆಂಕಟಶಿವಾರೆಡ್ಡಿ ಎದುರು ಕೇವಲ 1,193 ಮತಗಳಿಂದ ಪರಾಭವಗೊಂಡಿದ್ದರು. ರಮೇಶ್ ಕುಮಾರ್ ಎರಡು ಬಾರಿ ಸ್ಪೀಕರ್ ಹಾಗೂ<br />ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. </p>.<p>ರಮೇಶ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೆ, ವೆಂಕಟಶಿವಾರೆಡ್ಡಿ ಒಕ್ಕಲಿಗ ಸಮುದಾಯವರು. ಕ್ಷೇತ್ರದಲ್ಲಿ ಪರಿಶಿಷ್ಟರು, ಒಕ್ಕಲಿಗರು ಹಾಗೂ ಮುಸ್ಲಿಂ ಮತದಾರರೇ ಹೆಚ್ಚು. ಆಂಧ್ರದ ಜೊತೆ ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ತೆಲುಗು ಪ್ರಭಾವ ಹೆಚ್ಚಿದೆ.</p>.<p>2013, 2018ರಲ್ಲಿ ಮಾತ್ರ ರಮೇಶ್ ಅವರನ್ನೇ ಮತದಾರರು ಸತತವಾಗಿ ಎರಡು ಬಾರಿ ಗೆಲ್ಲಿಸಿದ್ದರು. ತಮ್ಮಕೊನೆಯ ಚುನಾವಣೆ ಎಂದು ಪ್ರಚಾರ ನಡೆಸುತ್ತಿದ್ದು, ರಮೇಶ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಗೆಲುವು ಒಲಿಯಲಿದೆಯೋ? ವೆಂಕಟಶಿವಾರೆಡ್ಡಿ ಅವರತ್ತ<br />ಮತದಾರರು ಕರುಣೆ ತೋರಲಿದ್ದಾರೆಯೋ ಎಂಬ ಕುತೂಹಲವಿದೆ. ಬಿಜೆಪಿ ಅಭ್ಯರ್ಥಿಗಳು ಕಳೆದ 3 ಚುನಾವಣೆಗಳಲ್ಲಿ 5 ಸಾವಿರಕ್ಕಿಂತ ಹೆಚ್ಚು ಮತ ಪಡೆದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 40 ವರ್ಷಗಳಿಂದ (ಒಂಬತ್ತು ಚುನಾವಣೆಗಳಲ್ಲಿ) ಕೆ.ಆರ್. ರಮೇಶ್ ಕುಮಾರ್ ಹಾಗೂ ಜಿ.ಕೆ. ವೆಂಕಟಶಿವಾರೆಡ್ಡಿ ನಡುವೆಯೇ ಪೈಪೋಟಿ ಇದೆ.</p>.<p>ಈ ಅವಧಿಯಲ್ಲಿ ಅವರು ಸ್ಪರ್ಧಿಸಿರುವ ಪಕ್ಷಗಳು ಬದಲಾದರೂ ‘ಸ್ವಾಮಿ’, ‘ರೆಡ್ಡಿ’ ಎಂದೇ ಪ್ರಸಿದ್ಧರಾಗಿರುವ ಇವರಿಬ್ಬರ ನಡುವಿನ ಜಿದ್ದಾಜಿದ್ದಿಗೆ ತಡೆ ಬಿದ್ದಿಲ್ಲ. ಹಿಂಬಾಲಕರು, ಕಾರ್ಯಕರ್ತರ ಮನಸ್ಸು ಬದಲಾಗಿಲ್ಲ. ಒಮ್ಮೆ ವೆಂಕಟಶಿವಾರೆಡ್ಡಿ ಹಿಡಿತ ಸಾಧಿಸಿದರೆ, ಮತ್ತೊಮ್ಮೆ ರಮೇಶ್ ಕುಮಾರ್ ಗೆಲ್ಲುತ್ತಾ ಬಂದಿದ್ದಾರೆ.</p>.<p>ವೆಂಕಟಶಿವಾರೆಡ್ಡಿ ಕಾಂಗ್ರೆಸ್, ಬಿಜೆಪಿ ಸುತ್ತಿ ಜೆಡಿಎಸ್ಗೆ ಬಂದರೆ, ರಮೇಶ್ ಪಕ್ಷೇತರ, ಕಾಂಗ್ರೆಸ್, ಜನತಾ ಪರಿವಾರ ಸುತ್ತಿ ಮತ್ತೆ ಕಾಂಗ್ರೆಸ್ಗೆ ಬಂದಿದ್ದಾರೆ.</p>.<p>1978ರಲ್ಲಿ ವಿಧಾನಸಭೆ ಚುನಾವಣೆಗೆ ಪದಾರ್ಪಣೆ ಮಾಡಿದ್ದ ರಮೇಶ್ ಕುಮಾರ್ ಕಾಂಗ್ರೆಸ್ನಿಂದ ಗೆದ್ದಿದ್ದರು. 1983ರ ವಿಧಾನಸಭೆ ಚುನಾ<br />ವಣೆಯಿಂದ ಇವರಿಬ್ಬರ ಪೈಪೋಟಿ ಆರಂಭವಾಯಿತು. ಆ ಚುನಾವಣೆಯಲ್ಲಿ ವೆಂಕಟಶಿವಾರೆಡ್ಡಿ ಕಾಂಗ್ರೆಸ್ನಿಂದ ಗೆದ್ದಿ<br />ದ್ದರು. ಟಿಕೆಟ್ ಕೈತಪ್ಪಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿದ್ದ ರಮೇಶ್ ಕುಮಾರ್ ಕೇವಲ 642 ಮತಗಳಿಂದ ಸೋತಿದ್ದರು.</p>.<p>1999ರಲ್ಲೂ ಅವರು ಸ್ವತಂತ್ರ ಅಭ್ಯರ್ಥಿಯಾಗಿ ವೆಂಕಟಶಿವಾರೆಡ್ಡಿ ಎದುರು ಕೇವಲ 1,193 ಮತಗಳಿಂದ ಪರಾಭವಗೊಂಡಿದ್ದರು. ರಮೇಶ್ ಕುಮಾರ್ ಎರಡು ಬಾರಿ ಸ್ಪೀಕರ್ ಹಾಗೂ<br />ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. </p>.<p>ರಮೇಶ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೆ, ವೆಂಕಟಶಿವಾರೆಡ್ಡಿ ಒಕ್ಕಲಿಗ ಸಮುದಾಯವರು. ಕ್ಷೇತ್ರದಲ್ಲಿ ಪರಿಶಿಷ್ಟರು, ಒಕ್ಕಲಿಗರು ಹಾಗೂ ಮುಸ್ಲಿಂ ಮತದಾರರೇ ಹೆಚ್ಚು. ಆಂಧ್ರದ ಜೊತೆ ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ತೆಲುಗು ಪ್ರಭಾವ ಹೆಚ್ಚಿದೆ.</p>.<p>2013, 2018ರಲ್ಲಿ ಮಾತ್ರ ರಮೇಶ್ ಅವರನ್ನೇ ಮತದಾರರು ಸತತವಾಗಿ ಎರಡು ಬಾರಿ ಗೆಲ್ಲಿಸಿದ್ದರು. ತಮ್ಮಕೊನೆಯ ಚುನಾವಣೆ ಎಂದು ಪ್ರಚಾರ ನಡೆಸುತ್ತಿದ್ದು, ರಮೇಶ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಗೆಲುವು ಒಲಿಯಲಿದೆಯೋ? ವೆಂಕಟಶಿವಾರೆಡ್ಡಿ ಅವರತ್ತ<br />ಮತದಾರರು ಕರುಣೆ ತೋರಲಿದ್ದಾರೆಯೋ ಎಂಬ ಕುತೂಹಲವಿದೆ. ಬಿಜೆಪಿ ಅಭ್ಯರ್ಥಿಗಳು ಕಳೆದ 3 ಚುನಾವಣೆಗಳಲ್ಲಿ 5 ಸಾವಿರಕ್ಕಿಂತ ಹೆಚ್ಚು ಮತ ಪಡೆದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>