ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನುರಿತ ಕಲಾವಿದರು ಗಣೇಶ ವಿಗ್ರಹ ತಯಾರಿಕೆ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಭಾಗವಹಿಸುವವರಿಗೆ ಜೇಡಿಮಣ್ಣು ಹಾಗೂ ಅಡಿಕೆ ತಟ್ಟೆಗಳನ್ನು ಕೊಡಲಾಗುತ್ತದೆ. ತಯಾರಿಸಿದ ಗಣೇಶ ಮೂರ್ತಿಗಳನ್ನು ಮನೆಗೆ ಕೊಂಡೊಯ್ಯುವ ಅವಕಾಶವೂ ಇದೆ. ಇದರ ಜೊತೆಗೆ ಪ್ರಶಸ್ತಿ ಪತ್ರ ಹಾಗೂ ಲಾಡು ಪ್ರಸಾದವನ್ನೂ ನೀಡಲಾಗುತ್ತದೆ.