‘ಪೊಲೀಸರು ದಾಳಿ ನಡೆಸಿದ ವೇಳೆ, ಶ್ರೀಲತಾ ಸಹ ಸಿಕ್ಕಿ ಬಿದ್ದಿದ್ದರು. ಇವರ ರಕ್ತದ ಮಾದರಿ ಸಂಗ್ರಹಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪ್ರಮುಖ ಆರೋಪಿ ಅತುಲ್ ತಲೆಮರೆಸಿಕೊಂಡಿದ್ದಾನೆ. ಎರಡು ದಿನಗಳಲ್ಲಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು. ಪೊಲೀಸ್ ವಶದಲ್ಲಿದ್ದ ಎಸ್ಟೇಟ್ ಮಾಲೀಕ ಗಗನ್, ಬೆಂಗಳೂರಿನ ಮುರುಗೇಶ್ಪಾಳ್ಯ ನಿವಾಸಿ ಸೋನಿ, ಬನ್ನೇರುಘಟ್ಟ ನಿವಾಸಿ ಪಂಕಜ್ ಅವರ ಬಳಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳು ಪತ್ತೆಯಾದ ಕಾರಣ, ಇವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ’ ಎಂದು ಡಿವೈಎಸ್ಪಿ ಬಿ.ಆರ್. ಗೋಪಿ ತಿಳಿಸಿದ್ದಾರೆ.