<p><strong>ಉಚ್ಚಂಗಿದುರ್ಗ (ಬಳ್ಳಾರಿ ಜಿಲ್ಲೆ):</strong> ಇಲ್ಲಿಯ ಶತಮಾನದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಬರೋಬ್ಬರಿ 503 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಮೂಲಕ ಇದು ಹರಪನಹಳ್ಳಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ದಾಖಲಾತಿ ಪಡೆದ ಸರ್ಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ.</p>.<p>ಕಳೆದ ವರ್ಷ 426 ವಿದ್ಯಾರ್ಥಿಗಳು ಇದ್ದರು. ವಲಸೆ ಹೋದ ಹಲವು ಗ್ರಾಮಸ್ಥರು ಈ ವರ್ಷ ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಊರಿಗೆ ಮರಳಿದ್ದು, ಇವರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ.</p>.<p>1905ರಲ್ಲಿ ಸ್ಥಾಪನೆಗೊಂಡು ಇಂದಿಗೆ 115 ವಸಂತಗಳನ್ನು ಪೂರೈಸಿದೆ. ಬ್ರಿಟಿಷರ ಆಡಳಿತ ಅವಧಿಯಲ್ಲಿ ಗ್ರಾಮದಲ್ಲಿ ಸ್ಥಾಪನೆಗೊಂಡ ಮೊದಲ ಶಾಲೆ ಎನ್ನುವ ಹೆಗ್ಗಳಿಕೆ ಇದರದ್ದು. 1950ರಿಂದ 1980ರವರೆಗೂ ಈ ಶಾಲೆಗೆ ಸುಮಾರು 600 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಇಟ್ಟ ಕಾನ್ವೆಂಟ್ ಶಾಲೆಗಳಿಂದಾಗಿ ಈ ಸರ್ಕಾರಿ ಶಾಲೆಯ ದಾಖಲಾತಿಯಲ್ಲೂ ಗಣನೀಯವಾಗಿ ಕುಸಿದಿತ್ತು.</p>.<p>ಇಂತಹ ಸಂದರ್ಭದಲ್ಲಿ ಸರ್ಕಾರ ಒದಗಿಸಿರುವ ಸವಲತ್ತುಗಳ ಮಾಹಿತಿ ನೀಡಿ, ಮೂಲಸೌಕರ್ಯ ಕುರಿತು ಮನವರಿಕೆ ಮಾಡಿಸಿ, ಶಾಲೆ ಬಿಟ್ಟ ಮಕ್ಕಳನ್ನು ಕರೆತರುವಲ್ಲಿ ಶಿಕ್ಷಕರು ವಹಿಸಿದ ಪರಿಶ್ರಮ ಫಲಕೊಟ್ಟಿದೆ.</p>.<p>ಶಾಲೆಯಲ್ಲಿ 14 ಶಿಕ್ಷಕರಿದ್ದಾರೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಹೊಸ ಫಿಲ್ಟರ್ ಅಳವಡಿಸಲಾಗಿದೆ. ಗಾಳಿ, ಬೆಳಕು ಇರುವ ತರಗತಿ ಕೋಣೆಗಳಿವೆ. ಉಳಿದ ಸೌಲಭ್ಯ ಒದಗಿಸುವ ಬದ್ಧತೆಯನ್ನೂ ಶಿಕ್ಷಕರು ಪ್ರದರ್ಶಿಸಿದ್ದಾರೆ.</p>.<p>‘ಗುಣಮಟ್ಟದ ಶಿಕ್ಷಣದಿಂದಾಗಿ ಪ್ರತಿವರ್ಷ 3-5 ವಿದ್ಯಾರ್ಥಿಗಳು ವಸತಿಶಾಲೆಗೆ ಆಯ್ಕೆಯಾಗುತ್ತಿದ್ದಾರೆ.ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿನಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹೀಗಾಗಿ ಈ ಶಾಲೆ ಅಚ್ಚುಮೆಚ್ಚಾಗಿದೆ’ ಎನ್ನುತ್ತಾರೆ ಪೋಷಕ ಕೆಂಚಪ್ಪ.</p>.<p><strong>***</strong></p>.<p>ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಕೈಗೊಂಡ ಕ್ರಮಗಳು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪೋಷಕರನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುತ್ತಿವೆ-<strong>-ಎಸ್.ಎಂ. ವೀರಭದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ</strong></p>.<p><strong>***</strong></p>.<p>ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಇದು ಶಿಕ್ಷಣ ಇಲಾಖೆಯ ಪ್ರಗತಿಯ ಸೂಚನೆ.<br /><strong>– ಎಂ.ಎಂ ಚಂದ್ರಪ್ಪ, ಸಿ.ಆರ್.ಪಿ, ಉಚ್ಚಂಗಿದುರ್ಗ ವಲಯ</strong></p>.<p><strong>***</strong></p>.<p>ಶಾಲೆ ದಾಖಲಾತಿ ಜವಾಬ್ದಾರಿ ಹೆಚ್ಚಿಸಿದೆ. ತರಗತಿಗಳನ್ನು ವಿಭಾಗಿಸಿ ಪಾಠಗಳನ್ನು ಹೇಳಿಕೊಡಲಾಗುವುದು. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇದ್ದು, ಅದನ್ನು ಸರ್ಕಾರ ಭರ್ತಿ ಮಾಡಬೇಕು.</p>.<p><strong>-ಸಾದೇವ, ಮುಖ್ಯ ಶಿಕ್ಷಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಚ್ಚಂಗಿದುರ್ಗ (ಬಳ್ಳಾರಿ ಜಿಲ್ಲೆ):</strong> ಇಲ್ಲಿಯ ಶತಮಾನದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ ಬರೋಬ್ಬರಿ 503 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಮೂಲಕ ಇದು ಹರಪನಹಳ್ಳಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ದಾಖಲಾತಿ ಪಡೆದ ಸರ್ಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ.</p>.<p>ಕಳೆದ ವರ್ಷ 426 ವಿದ್ಯಾರ್ಥಿಗಳು ಇದ್ದರು. ವಲಸೆ ಹೋದ ಹಲವು ಗ್ರಾಮಸ್ಥರು ಈ ವರ್ಷ ಕೋವಿಡ್ ಲಾಕ್ಡೌನ್ ಕಾರಣದಿಂದಾಗಿ ಊರಿಗೆ ಮರಳಿದ್ದು, ಇವರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ.</p>.<p>1905ರಲ್ಲಿ ಸ್ಥಾಪನೆಗೊಂಡು ಇಂದಿಗೆ 115 ವಸಂತಗಳನ್ನು ಪೂರೈಸಿದೆ. ಬ್ರಿಟಿಷರ ಆಡಳಿತ ಅವಧಿಯಲ್ಲಿ ಗ್ರಾಮದಲ್ಲಿ ಸ್ಥಾಪನೆಗೊಂಡ ಮೊದಲ ಶಾಲೆ ಎನ್ನುವ ಹೆಗ್ಗಳಿಕೆ ಇದರದ್ದು. 1950ರಿಂದ 1980ರವರೆಗೂ ಈ ಶಾಲೆಗೆ ಸುಮಾರು 600 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಲಗ್ಗೆ ಇಟ್ಟ ಕಾನ್ವೆಂಟ್ ಶಾಲೆಗಳಿಂದಾಗಿ ಈ ಸರ್ಕಾರಿ ಶಾಲೆಯ ದಾಖಲಾತಿಯಲ್ಲೂ ಗಣನೀಯವಾಗಿ ಕುಸಿದಿತ್ತು.</p>.<p>ಇಂತಹ ಸಂದರ್ಭದಲ್ಲಿ ಸರ್ಕಾರ ಒದಗಿಸಿರುವ ಸವಲತ್ತುಗಳ ಮಾಹಿತಿ ನೀಡಿ, ಮೂಲಸೌಕರ್ಯ ಕುರಿತು ಮನವರಿಕೆ ಮಾಡಿಸಿ, ಶಾಲೆ ಬಿಟ್ಟ ಮಕ್ಕಳನ್ನು ಕರೆತರುವಲ್ಲಿ ಶಿಕ್ಷಕರು ವಹಿಸಿದ ಪರಿಶ್ರಮ ಫಲಕೊಟ್ಟಿದೆ.</p>.<p>ಶಾಲೆಯಲ್ಲಿ 14 ಶಿಕ್ಷಕರಿದ್ದಾರೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಗೆ ಹೊಸ ಫಿಲ್ಟರ್ ಅಳವಡಿಸಲಾಗಿದೆ. ಗಾಳಿ, ಬೆಳಕು ಇರುವ ತರಗತಿ ಕೋಣೆಗಳಿವೆ. ಉಳಿದ ಸೌಲಭ್ಯ ಒದಗಿಸುವ ಬದ್ಧತೆಯನ್ನೂ ಶಿಕ್ಷಕರು ಪ್ರದರ್ಶಿಸಿದ್ದಾರೆ.</p>.<p>‘ಗುಣಮಟ್ಟದ ಶಿಕ್ಷಣದಿಂದಾಗಿ ಪ್ರತಿವರ್ಷ 3-5 ವಿದ್ಯಾರ್ಥಿಗಳು ವಸತಿಶಾಲೆಗೆ ಆಯ್ಕೆಯಾಗುತ್ತಿದ್ದಾರೆ.ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿನಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹೀಗಾಗಿ ಈ ಶಾಲೆ ಅಚ್ಚುಮೆಚ್ಚಾಗಿದೆ’ ಎನ್ನುತ್ತಾರೆ ಪೋಷಕ ಕೆಂಚಪ್ಪ.</p>.<p><strong>***</strong></p>.<p>ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಕೈಗೊಂಡ ಕ್ರಮಗಳು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪೋಷಕರನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುತ್ತಿವೆ-<strong>-ಎಸ್.ಎಂ. ವೀರಭದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ</strong></p>.<p><strong>***</strong></p>.<p>ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಇದು ಶಿಕ್ಷಣ ಇಲಾಖೆಯ ಪ್ರಗತಿಯ ಸೂಚನೆ.<br /><strong>– ಎಂ.ಎಂ ಚಂದ್ರಪ್ಪ, ಸಿ.ಆರ್.ಪಿ, ಉಚ್ಚಂಗಿದುರ್ಗ ವಲಯ</strong></p>.<p><strong>***</strong></p>.<p>ಶಾಲೆ ದಾಖಲಾತಿ ಜವಾಬ್ದಾರಿ ಹೆಚ್ಚಿಸಿದೆ. ತರಗತಿಗಳನ್ನು ವಿಭಾಗಿಸಿ ಪಾಠಗಳನ್ನು ಹೇಳಿಕೊಡಲಾಗುವುದು. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಖಾಲಿ ಇದ್ದು, ಅದನ್ನು ಸರ್ಕಾರ ಭರ್ತಿ ಮಾಡಬೇಕು.</p>.<p><strong>-ಸಾದೇವ, ಮುಖ್ಯ ಶಿಕ್ಷಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>