ತಾಲ್ಲೂಕಿನ ಅರಬಗಟ್ಟೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನದು ಹುಲಿವೇಷ ಎಂದು ವಿನಾಕಾರಣ ನನ್ನ ಹೆಸರನ್ನು ತಂದು ಸಹಿ ಸಂಗ್ರಹದ ಕುರಿತು ಮಾತನಾಡಿದ್ದೀರಿ. ಚುನಾವಣಾ ಪೂರ್ವದಲ್ಲಿ ನೀವು ಏನು ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ನೀವು ರಾಜ್ಯಪಾಲರಿಗೆ ಪತ್ರ ಬರೆದಿದ್ದಿರಲ್ಲ, ಅದು ಯಾವ ಕಾರಣಕ್ಕಾಗಿ. ನಾವು ಏನಾದರೂ ಮಾತನಾಡಿದರೆ ವರಿಷ್ಠರು ಸಹಿಸೋಲ್ಲ ಎಂದು ಹೇಳಿದ್ದೀರಿ. ನಮಗೊಂದು ನ್ಯಾಯ, ನಿಮಗೊಂದು ನ್ಯಾಯವಾ’ ಎಂದು ಪ್ರಶ್ನಿಸಿದರು.