'ಕೃಷಿಕರ ಮಕ್ಕಳ ಶೇ 40ರ ಮೀಸಲಾತಿಯನ್ನು ಕೈ ತಪ್ಪಿಸುವ ಉದ್ದೇಶದಿಂದಲೇ ಸರ್ಕಾರದ ಕೆಲ ಅಧಿಕಾರಿಗಳು ಕೊರೊನಾ ನೆಪದಲ್ಲಿ ಪರೀಕ್ಷೆ ರದ್ದುಪಡಿಸಿದ್ದಾರೆ. ಕೃಷಿಕರ ಮಕ್ಕಳಿಗೆ ಕೃಷಿಯ ಜ್ಞಾನ ಹೆಚ್ಚಾಗಿರುವುದರಿಂದ ಅವರಿಗೆ ಪ್ರವೇಶಾತಿಯಲ್ಲಿ ಶೇ 90ರಷ್ಟು ಮೀಸಲಾತಿ ಸಿಗಬೇಕು. ಆದರೆ, ಇರುವ ಕನಿಷ್ಠ ಮೀಸಲಾತಿಯನ್ನೂ ಕಸಿಯುತ್ತಿರುವ ಕ್ರಮ ಸರಿಯಲ್ಲ. ಕೂಡಲೇ ಪರೀಕ್ಷೆ ರದ್ದತಿ ಆದೇಶ ಹಿಂಪಡೆದು, ಎಂದಿನಂತೆ ಪರೀಕ್ಷೆಗಳನ್ನು ನಡೆಸಬೇಕು. ಇಲ್ಲದಿದ್ದರೆ, ರಾಜ್ಯಮಟ್ಟದಲ್ಲಿ ರೈತಮಕ್ಕಳೊಂದಿಗೆ ಬೃಹತ್ ಪ್ರತಿಭಟನೆ ಮಾಡಲಾಗುವುದು' ಎಂದು ಎಚ್ಚರಿಸಿದರು.