ಘಟನೆ ಸಂಬಂಧ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಪ್ರಸನ್ನ ಅವರು, ‘ಗೋಡ್ಸೆ ನಾಮಫಲಕವನ್ನು ಬೋಳ ಗ್ರಾಮ ಪಂಚಾಯಿತಿ ಕಡೆಯಿಂದಯಿಂದ ಹಾಕಿಲ್ಲ. ರಸ್ತೆಗೆ ನಾಥೂರಾಮ್ ಗೋಡ್ಸೆ ಹೆಸರಿಡುವ ಯಾವ ನಿರ್ಣಯವನ್ನೂ ಗ್ರಾಮ ಪಂಚಾಯಿತಿ ತೆಗೆದುಕೊಂಡಿರಲಿಲ್ಲ. ಪಂಚಾಯಿತಿಯ ಗಮನಕ್ಕೆ ಬಾರದಂತೆ ನಾಮಫಲಕ ಹಾಕಲಾಗಿದೆ. ವಿಷಯ ತಿಳಿದ ಕೂಡಲೇ ತೆರವುಗೊಳಿಸಲಾಗಿದೆ. ಕಾರ್ಕಳ ಇಒಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಹಾಗೂ ಫಲಕ ಹಾಕಿದವರ ವಿರುದ್ಧ ಠಾಣೆಗೆ ದೂರು ನೀಡುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.