<p><strong>ಬೆಂಗಳೂರು:</strong> ಮಲ್ಲಸಂದ್ರ ಮತ್ತು ತುಮಕೂರು ಮಾರ್ಗದಲ್ಲಿ ಸುರಕ್ಷತಾ ಕಾಮಗಾರಿಗಳ ನಿರ್ವಹಿಸುವ ಸಲುವಾಗಿ ನಾಲ್ಕು ರೈಲುಗಳ ಸಂಚಾರವನ್ನು ಕೆಲ ದಿನಗಳ ಕಾಲ ಭಾಗಶಃ ರದ್ದುಪಡಿಸಲಾಗಿದ್ದು, ನಾಲ್ಕು ರೈಲುಗಳನ್ನು ಮಾರ್ಗ ಬದಲಿಸಿ ಸಂಚರಿಸಲು ರೈಲ್ವೆ ಇಲಾಖೆ ಮುಂದಾಗಿದೆ.</p>.<p>ಕೆಎಸ್ಆರ್–ಬೆಂಗಳೂರು ಎಕ್ಸ್ಪ್ರೆಸ್(ಗಾಡಿ ಸಂಖ್ಯೆ 06202) ರೈಲು ಸಂಚಾರವನ್ನು ಜ. 24ರಿಂದ 27ರವರೆಗೆ ಸ್ಥಗಿತಗೊಳಿಸಲಾಗಿದೆ.</p>.<p>ಯಶವಂತಪುರ–ಅರಸೀಕೆರೆ ಡೆಮು ವಿಶೇಷ ರೈಲು(ಗಾಡಿ ಸಂಖ್ಯೆ 06275) ಸಂಚಾರವನ್ನು ಜ.25, 26, 27 ಮತ್ತು 29ರಂದು ಭಾಗಶಃ ಸ್ಥಗಿತಗೊಳಿಸಿಲಾಗಿದೆ. ಆದರೆ, ಈ ರೈಲು ತುಮಕೂರು ಮತ್ತು ಯಶವಂತಪುರ ನಡುವೆ ಸಂಚರಿಸಲಿದೆ.</p>.<p>ಧಾರವಾಡ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು (02726) ಜ.24ರಿಂದ 27ರವರೆಗೆ ಧಾರವಾಡದಿಂದ ಅರಸೀಕೆರೆ ತನಕ ಮಾತ್ರ ಸಂಚರಿಸಲಿದೆ. ಅರಸೀಕೆರೆ–ಯಶವಂತಪುರ ಡೆಮು ರೈಲು (06276) ಜ.25ರಿಂದ 29ರವರೆಗೆ ತುಮಕೂರು ತನಕ ಹೋಗಿ ವಾಪಸ್ ಬರಲಿದೆ.</p>.<p>ಗೋವಾ–ಯಶವಂತಪುರ ಎಕ್ಸ್ಪ್ರೆಸ್ ರೈಲು(07340) ಜ.28ರಂದು ಅರಸೀಕೆರೆ ತನಕ ಸಂಚರಿಸಿ 29ರಂದು ವಾಪಸ್ ಗೋವಾ ಕಡೆಗೆ ಪ್ರಯಾಣ ಬೆಳಸಲಿದೆ.</p>.<p>ಯಶವಂತಪುರ–ಬಿಕನೇರ್(ರಾಜಸ್ಥಾನ) ಎಕ್ಸ್ಪ್ರೆಸ್(06587), ಯಶವಂತಪುರ–ಬಾರ್ಮರ್ (ರಾಜಸ್ಥಾನ) ಎಕ್ಸ್ಪ್ರೆಸ್ (04805), ಯಶವಂತಪುರ– ಹಜರತ್ ನಿಜಾಮುದ್ದೀನ್ ವಿಶೇಷ ಎಕ್ಸ್ಪ್ರೆಸ್ ರೈಲು (06249), ಮೈಸೂರು– ವಾರಾಣಸಿ ವಿಶೇಷ ಎಕ್ಸ್ಪ್ರೆಸ್ ರೈಲುಗಳು(06229) ಯಶವಂತಪುರ, ಚಿಕ್ಕಬಾಣಾವರ, ಶ್ರವಣಬೆಳಗೊಳ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಲ್ಲಸಂದ್ರ ಮತ್ತು ತುಮಕೂರು ಮಾರ್ಗದಲ್ಲಿ ಸುರಕ್ಷತಾ ಕಾಮಗಾರಿಗಳ ನಿರ್ವಹಿಸುವ ಸಲುವಾಗಿ ನಾಲ್ಕು ರೈಲುಗಳ ಸಂಚಾರವನ್ನು ಕೆಲ ದಿನಗಳ ಕಾಲ ಭಾಗಶಃ ರದ್ದುಪಡಿಸಲಾಗಿದ್ದು, ನಾಲ್ಕು ರೈಲುಗಳನ್ನು ಮಾರ್ಗ ಬದಲಿಸಿ ಸಂಚರಿಸಲು ರೈಲ್ವೆ ಇಲಾಖೆ ಮುಂದಾಗಿದೆ.</p>.<p>ಕೆಎಸ್ಆರ್–ಬೆಂಗಳೂರು ಎಕ್ಸ್ಪ್ರೆಸ್(ಗಾಡಿ ಸಂಖ್ಯೆ 06202) ರೈಲು ಸಂಚಾರವನ್ನು ಜ. 24ರಿಂದ 27ರವರೆಗೆ ಸ್ಥಗಿತಗೊಳಿಸಲಾಗಿದೆ.</p>.<p>ಯಶವಂತಪುರ–ಅರಸೀಕೆರೆ ಡೆಮು ವಿಶೇಷ ರೈಲು(ಗಾಡಿ ಸಂಖ್ಯೆ 06275) ಸಂಚಾರವನ್ನು ಜ.25, 26, 27 ಮತ್ತು 29ರಂದು ಭಾಗಶಃ ಸ್ಥಗಿತಗೊಳಿಸಿಲಾಗಿದೆ. ಆದರೆ, ಈ ರೈಲು ತುಮಕೂರು ಮತ್ತು ಯಶವಂತಪುರ ನಡುವೆ ಸಂಚರಿಸಲಿದೆ.</p>.<p>ಧಾರವಾಡ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು (02726) ಜ.24ರಿಂದ 27ರವರೆಗೆ ಧಾರವಾಡದಿಂದ ಅರಸೀಕೆರೆ ತನಕ ಮಾತ್ರ ಸಂಚರಿಸಲಿದೆ. ಅರಸೀಕೆರೆ–ಯಶವಂತಪುರ ಡೆಮು ರೈಲು (06276) ಜ.25ರಿಂದ 29ರವರೆಗೆ ತುಮಕೂರು ತನಕ ಹೋಗಿ ವಾಪಸ್ ಬರಲಿದೆ.</p>.<p>ಗೋವಾ–ಯಶವಂತಪುರ ಎಕ್ಸ್ಪ್ರೆಸ್ ರೈಲು(07340) ಜ.28ರಂದು ಅರಸೀಕೆರೆ ತನಕ ಸಂಚರಿಸಿ 29ರಂದು ವಾಪಸ್ ಗೋವಾ ಕಡೆಗೆ ಪ್ರಯಾಣ ಬೆಳಸಲಿದೆ.</p>.<p>ಯಶವಂತಪುರ–ಬಿಕನೇರ್(ರಾಜಸ್ಥಾನ) ಎಕ್ಸ್ಪ್ರೆಸ್(06587), ಯಶವಂತಪುರ–ಬಾರ್ಮರ್ (ರಾಜಸ್ಥಾನ) ಎಕ್ಸ್ಪ್ರೆಸ್ (04805), ಯಶವಂತಪುರ– ಹಜರತ್ ನಿಜಾಮುದ್ದೀನ್ ವಿಶೇಷ ಎಕ್ಸ್ಪ್ರೆಸ್ ರೈಲು (06249), ಮೈಸೂರು– ವಾರಾಣಸಿ ವಿಶೇಷ ಎಕ್ಸ್ಪ್ರೆಸ್ ರೈಲುಗಳು(06229) ಯಶವಂತಪುರ, ಚಿಕ್ಕಬಾಣಾವರ, ಶ್ರವಣಬೆಳಗೊಳ, ಹಾಸನ, ಅರಸೀಕೆರೆ ಮಾರ್ಗದಲ್ಲಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>