<p><strong>ಶಿರಸಿ: </strong>ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.</p>.<p>‘ಕೊರೊನಾ ಸಂದರ್ಭವೆಂದು ಓದುವುದನ್ನು ಬಿಟ್ಟಿರಲಿಲ್ಲ. ಓದಿದ ವಿಷಯ ಮರೆಯಬಾರದೆಂದು ಶಾಲೆಯಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿ, ಉತ್ತರ ಬರೆದು ಹಾಕುವಂತೆ ತಿಳಿಸುತ್ತಿದ್ದರು. ಗೂಗಲ್ ಮೀಟ್ ಮೂಲಕ ಗಣಿತ, ವಿಜ್ಞಾನ ವಿಷಯಗಳ ಪುನರ್ ಮನನ ಮಾಡುತ್ತಿದ್ದರು. ಇದು ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಯಿತು’ ಎನ್ನುತ್ತಾಳೆ ಸನ್ನಿಧಿ.</p>.<p>‘ಪ್ರಥಮ ಸ್ಥಾನ ಬರುವ ನಿರೀಕ್ಷೆಯಿತ್ತು. ಯಾವುದೇ ಟ್ಯೂಷನ್ಗೆ ಹೋಗಿಲ್ಲ. ಶಾಲೆಯಲ್ಲಿ ಕಲಿಸಿದ ಪಾಠವನ್ನು ಸರಿಯಾಗಿ ಕೇಳುತ್ತಿದ್ದೆ. ಅವುಗಳ ಪುನರ್ ಮನನ ಮಾಡಿದ್ದೆ. ಓದುವ ಮನಸ್ಸು ಬಂದಾಗ ಶ್ರದ್ಧೆಯಿಂದ ಓದುತ್ತಿದ್ದೆ. ಮನೆಯವರು ಎಲ್ಲ ಸಹಕಾರ ನೀಡಿದ್ದರು’ ಎಂದು ಖುಷಿಯಿಂದ ಹೇಳಿದಳು.</p>.<p>ಈಕೆ ಇಲ್ಲಿನ ಪ್ರಗತಿನಗರದ ವೀಣಾ ಮತ್ತು ಡಾ.ಮಹಾಬಲೇಶ್ವರ ಹೆಗಡೆ ದಂಪತಿ ಪುತ್ರಿ. ‘ಮಗಳ ಸಾಧನೆ ತಿಳಿದು ಎಲ್ಲಿಲ್ಲದ ಖುಷಿಯಾಗಿದೆ. ಆಕೆಯ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಆಕೆಯ ಸಾಧನೆಯ ಹಿಂದೆ ಶಿಕ್ಷಕರು, ಸಹಪಾಠಿಗಳ ಸಹಕಾರವೂ ಇದೆ’ ಎಂದು ಮಹಾಬಲೇಶ್ವರ ಹೆಗಡೆ ಹೇಳಿದರು. ಅವರ ಪ್ರಥಮ ಪುತ್ರಿ ಸನ್ಮಯಿ ಹೆಗಡೆ, ಈ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ನಗರದ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.</p>.<p>‘ಕೊರೊನಾ ಸಂದರ್ಭವೆಂದು ಓದುವುದನ್ನು ಬಿಟ್ಟಿರಲಿಲ್ಲ. ಓದಿದ ವಿಷಯ ಮರೆಯಬಾರದೆಂದು ಶಾಲೆಯಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿ, ಉತ್ತರ ಬರೆದು ಹಾಕುವಂತೆ ತಿಳಿಸುತ್ತಿದ್ದರು. ಗೂಗಲ್ ಮೀಟ್ ಮೂಲಕ ಗಣಿತ, ವಿಜ್ಞಾನ ವಿಷಯಗಳ ಪುನರ್ ಮನನ ಮಾಡುತ್ತಿದ್ದರು. ಇದು ಹೆಚ್ಚಿನ ಅಂಕ ಪಡೆಯಲು ಸಹಕಾರಿಯಾಯಿತು’ ಎನ್ನುತ್ತಾಳೆ ಸನ್ನಿಧಿ.</p>.<p>‘ಪ್ರಥಮ ಸ್ಥಾನ ಬರುವ ನಿರೀಕ್ಷೆಯಿತ್ತು. ಯಾವುದೇ ಟ್ಯೂಷನ್ಗೆ ಹೋಗಿಲ್ಲ. ಶಾಲೆಯಲ್ಲಿ ಕಲಿಸಿದ ಪಾಠವನ್ನು ಸರಿಯಾಗಿ ಕೇಳುತ್ತಿದ್ದೆ. ಅವುಗಳ ಪುನರ್ ಮನನ ಮಾಡಿದ್ದೆ. ಓದುವ ಮನಸ್ಸು ಬಂದಾಗ ಶ್ರದ್ಧೆಯಿಂದ ಓದುತ್ತಿದ್ದೆ. ಮನೆಯವರು ಎಲ್ಲ ಸಹಕಾರ ನೀಡಿದ್ದರು’ ಎಂದು ಖುಷಿಯಿಂದ ಹೇಳಿದಳು.</p>.<p>ಈಕೆ ಇಲ್ಲಿನ ಪ್ರಗತಿನಗರದ ವೀಣಾ ಮತ್ತು ಡಾ.ಮಹಾಬಲೇಶ್ವರ ಹೆಗಡೆ ದಂಪತಿ ಪುತ್ರಿ. ‘ಮಗಳ ಸಾಧನೆ ತಿಳಿದು ಎಲ್ಲಿಲ್ಲದ ಖುಷಿಯಾಗಿದೆ. ಆಕೆಯ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಆಕೆಯ ಸಾಧನೆಯ ಹಿಂದೆ ಶಿಕ್ಷಕರು, ಸಹಪಾಠಿಗಳ ಸಹಕಾರವೂ ಇದೆ’ ಎಂದು ಮಹಾಬಲೇಶ್ವರ ಹೆಗಡೆ ಹೇಳಿದರು. ಅವರ ಪ್ರಥಮ ಪುತ್ರಿ ಸನ್ಮಯಿ ಹೆಗಡೆ, ಈ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>